News Karnataka Kannada
Saturday, May 11 2024
ಕರ್ನಾಟಕ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ತೀವ್ರ ವಾಗ್ದಾಳಿ

Photo Credit :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ತೀವ್ರ ವಾಗ್ದಾಳಿ

ಬೆಳಗಾವಿ: “ಬ್ರಿಟಿಷರಿಗಿಂತ ಹೆಚ್ಚು ಸಮಾಜವನ್ನು ಒಡೆದು ಆಡಳಿತ ನಡೆಸಿದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

“ಅವರು ಮುಖ್ಯಮಂತ್ರಿಯಾಗಿದಂತಹ ಸಮಯದಲ್ಲಿ 3000 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಒಬ್ಬ ರೈತನ ಮನೆಗೆ ಹೋಗಿ ಸಂತೈಸುವ ಕಾರ್ಯ ಸಿದ್ದರಾಮಯ್ಯ ಮಾಡಿಲ್ಲ. ಇನ್ನು ಸಮಾಜವನ್ನು ಒಡೆದು ಆಳಿದ್ದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹ ವ್ಯಕ್ತಿಗೆ ಈಗ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಅಥವಾ ಟೀಕಿಸುವ ಯಾವ ಅಧಿಕಾರವಿದೆ” ಎಂದು ಪ್ರಶ್ನಿಸಿದರು.

“ಟಿಪ್ಪು ಸುಲ್ತಾನ್ ಜಯಂತಿಯ ಹೆಸರಿನಲ್ಲಿ ಗಲಭೆಯನ್ನು ಸೃಷ್ಟಿಸಿದರು. ಲಿಂಗಾಯತ ವೀರಶೈವ ಎಂಬ ಅನಾವಶ್ಯಕ ಭೇದಗಳನ್ನು ಸೃಷ್ಟಿಸಿ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡಿದರು. ಅವರ ಇಂತಹ ಕೆಲಸಗಳಿಂದಲೇ ಒಬ್ಬ ಮುಖ್ಯಮಂತ್ರಿಯಾಗಿದ್ದರು ಅವರ ಅವರ ಊರಾದ ಮೈಸೂರಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೆ ಕ್ಷೇತ್ರದಲ್ಲಿ ನಿತ್ತು ಗೆಲ್ಲುವ ಪರಿಸ್ಥಿತಿ ಅವರದಾಗಿತ್ತು” ಎಂದು ಕಟೀಲ್ ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು