News Karnataka Kannada
Monday, May 13 2024
ಕರ್ನಾಟಕ

ಭ್ರಷ್ಟಾಚಾರ ನಿಯಂತ್ರಣ ಮಧುಮೇಹಕ್ಕಿಂತಲೂ ಭಾರಿ ಅಪಾಯಕಾರಿ: ಸಂತೋಷ್ ಹೆಗಡೆ

Photo Credit :

 ಭ್ರಷ್ಟಾಚಾರ ನಿಯಂತ್ರಣ ಮಧುಮೇಹಕ್ಕಿಂತಲೂ ಭಾರಿ ಅಪಾಯಕಾರಿ: ಸಂತೋಷ್ ಹೆಗಡೆ

ಮಂಡ್ಯ: ದೇಶಾದ್ಯಂತ ವ್ಯಾಪಕವಾಗಿ ಬೆಳೆದು ನಿಂತಿರುವ ಭ್ರಷ್ಟಾಚಾರ ನಿಯಂತ್ರಣ ಮಧುಮೇಹಕ್ಕಿಂತಲೂ ಭಾರಿ ಅಪಾಯಕಾರಿಯಾಗಿದೆ ಎಂದು  ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗಡೆ ಹೇಳಿದರು.


ನಗರದ ಕಲಾಮಂದಿರದಲ್ಲಿ ಕಾವೇರಿ ಡಯಾಬಿಟಿಕ್ ಪೌಂಢೇಷನ್ ವತಿಯಿಂದ ನಡೆದ ಸಕ್ಕರೆ ಕಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ 6 ಜನರಲ್ಲಿ ಒಬ್ಬರಿಗೆ ಮಧುಮೇಹ ಕಾಯಿಲೆ ಇದ್ದು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ ಎಂದು ಮೈಸೂರು ಮಹಾಸಂಸ್ಥಾನದ ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಷಾದಿಸಿದರು.

ಕಾವೇರಿ ಫೌಂಡೇಷನ್ ಅಧ್ಯಕ್ಷ ಡಾ.ಕೆ.ರಾಮಚಂದ್ರ ಮಾತನಾಡಿ, ಭಾರತ ಒಂದರಲ್ಲೇ 10 ರಿಂದ 15 ಕೋಟಿ ಮಧುಮೇಹಿಗಳಿದ್ದಾರೆ. ಬೆಂಗಳೂರಿನಲ್ಲಿ ಶೇ.100 ರಲ್ಲಿ 25 ರಷ್ಟು, ಮಂಡ್ಯದಲ್ಲಿ ಶೇ.6 ರಿಂದ 7 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶೇ.2 ರಷ್ಟು ಮಧುಮೇಹಿಗಳಿದ್ದಾರೆ. ಆದರೆ, ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದರು.

ಮಧುಮೇಹದಿಂದ ಕಿಡ್ನಿ, ಹೃದಯ, ಕಣ್ಣು, ಚರ್ಮ, ಕರುಳಿನ ಕಾಯಿಲೆಗಳು ಬಹುಬೇಗ ಹರಡುತ್ತಿವೆ. ಇದನ್ನು ತಡೆಗಟ್ಟುವ ವೈದ್ಯರುಗಳೇ ನಮ್ಮಲ್ಲಿ ಇಲ್ಲ. ವೈದ್ಯರು ಕೂಡ ಕನಿಷ್ಠ ತಿಂಗಳಲ್ಲೇ 2 ದಿನಗಳಾದರೂ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು