ಮಂಡ್ಯ: ದೇಶಾದ್ಯಂತ ವ್ಯಾಪಕವಾಗಿ ಬೆಳೆದು ನಿಂತಿರುವ ಭ್ರಷ್ಟಾಚಾರ ನಿಯಂತ್ರಣ ಮಧುಮೇಹಕ್ಕಿಂತಲೂ ಭಾರಿ ಅಪಾಯಕಾರಿಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗಡೆ ಹೇಳಿದರು.
ನಗರದ ಕಲಾಮಂದಿರದಲ್ಲಿ ಕಾವೇರಿ ಡಯಾಬಿಟಿಕ್ ಪೌಂಢೇಷನ್ ವತಿಯಿಂದ ನಡೆದ ಸಕ್ಕರೆ ಕಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ 6 ಜನರಲ್ಲಿ ಒಬ್ಬರಿಗೆ ಮಧುಮೇಹ ಕಾಯಿಲೆ ಇದ್ದು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ ಎಂದು ಮೈಸೂರು ಮಹಾಸಂಸ್ಥಾನದ ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಷಾದಿಸಿದರು.
ಕಾವೇರಿ ಫೌಂಡೇಷನ್ ಅಧ್ಯಕ್ಷ ಡಾ.ಕೆ.ರಾಮಚಂದ್ರ ಮಾತನಾಡಿ, ಭಾರತ ಒಂದರಲ್ಲೇ 10 ರಿಂದ 15 ಕೋಟಿ ಮಧುಮೇಹಿಗಳಿದ್ದಾರೆ. ಬೆಂಗಳೂರಿನಲ್ಲಿ ಶೇ.100 ರಲ್ಲಿ 25 ರಷ್ಟು, ಮಂಡ್ಯದಲ್ಲಿ ಶೇ.6 ರಿಂದ 7 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶೇ.2 ರಷ್ಟು ಮಧುಮೇಹಿಗಳಿದ್ದಾರೆ. ಆದರೆ, ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದರು.
ಮಧುಮೇಹದಿಂದ ಕಿಡ್ನಿ, ಹೃದಯ, ಕಣ್ಣು, ಚರ್ಮ, ಕರುಳಿನ ಕಾಯಿಲೆಗಳು ಬಹುಬೇಗ ಹರಡುತ್ತಿವೆ. ಇದನ್ನು ತಡೆಗಟ್ಟುವ ವೈದ್ಯರುಗಳೇ ನಮ್ಮಲ್ಲಿ ಇಲ್ಲ. ವೈದ್ಯರು ಕೂಡ ಕನಿಷ್ಠ ತಿಂಗಳಲ್ಲೇ 2 ದಿನಗಳಾದರೂ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.