News Karnataka Kannada
Saturday, May 18 2024
ಕರ್ನಾಟಕ

ಬೀಡನಹಳ್ಳಿ ನಂದಿ ಬಸವೇಶ್ವರ ಜಾತ್ರೆಯಲ್ಲಿ ಬಂಡಿ ಓಟ

Photo Credit :

ಬೀಡನಹಳ್ಳಿ ನಂದಿ ಬಸವೇಶ್ವರ ಜಾತ್ರೆಯಲ್ಲಿ ಬಂಡಿ ಓಟ

ಬನ್ನೂರು: ಪಟ್ಟಣಕ್ಕೆ ಸಮೀಪದ ಬೀಡನಹಳ್ಳಿ ಗ್ರಾಮದಲ್ಲಿ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ದೇವಾಲಯದ ಆವರಣದಲ್ಲಿ ಬಂಡಿ ಓಟ ನಡೆಯಿತು.

ಬೆಳಿಗ್ಗೆಯಿಂದಲೇ ಹೂ ತಳಿರು ತೋರಣದಿಂದ ಸಿಂಗರಿಸಿದ್ದ ಬಂಡಿಯನ್ನು ದೇವಾಲಯದ ಆವರಣದಲ್ಲಿ ತಂದು ದೇವರಿಗೆ ಪೂಜೆ ಸಲ್ಲಿಸಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಒಳಗೆ ಮೆರಣಿಗೆ ಹೊರಡಿಸಲಾಯಿತು. ದೇವಾಲಯದ ಸ್ಥಳಕ್ಕೆ ಬಂದು ಪಟ್ಟಿಯಲ್ಲಿ ಹೆಸರು ನಮೂದು ಮಾಡಿದ ಜೊತೆ ಎತ್ತುಗಳಿಗೆ ಬಂಡಿಗೆ ಕಟ್ಟುವ ಮೂಲಕ ದೇವಾಲಯದ ಆವರಣದಲ್ಲಿ ಒಂದು ಸುತ್ತು ಓಡಿಸಲಾಯಿತು. ಹೀಗೆ ಸುಮಾರು ಜೊಡೆತ್ತು ಬಂಡಿ ಓಟದಲ್ಲಿ ಪಾಲ್ಗೊಂಡಿದ್ದವು. ಮಧ್ಯಾಹ್ನ 3 ರಿಂದ ಪ್ರಾರಂಭವಾಗಿ ಸಂಜೆ 6 ರ ತನಕ ಬಂಡಿ ಓಟ ನಡೆಯಿತು.

ಪಟ್ಟಣದ ಸಂತೆಮಾಳದ ಮಾರ್ಗವಾಗಿ ಬೀಡಹಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ದೇವಾಲಯಕ್ಕೆ 1 ಕಿ.ಮೀ ಇದ್ದು, ಅನ್ನದಾನ ಪ್ರಭುವಿನ ದೇವಾಲಯ ಎಂದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಖ್ಯಾತಿ ಪಡೆದಿರುವ ನಂದಿ ಬಸವೇಶ್ವರ ದೇವಾಲಯದಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, 15ನೇ ತಾರೀಕಿನ ಸೋಮವಾರ ಬೆಳಿಗ್ಗೆ 6.15 ರಿಂದ 7.30 ರವರೆಗೆ ದೇವಾಲಯದ ಮುಂಭಾಗ ಕೊಂಡೋತ್ಸವ ನಡೆಯಲಿದ್ದು, ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ತಮ್ಮ ಕಷ್ಟ ಕಾರ್ಪಣ್ಯ ನಿವಾರಣೆಗೆ ದೇವರಲ್ಲಿ ವಿನಂತಿಸಿಕೊಂಡರು. ಮಾ.19ರ ಶುಕ್ರವಾರ ಅನ್ನಸಂತರ್ಪಣೆ ನಡೆಯುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು