ಬನ್ನೂರು: ಪಟ್ಟಣಕ್ಕೆ ಸಮೀಪದ ಬೀಡನಹಳ್ಳಿ ಗ್ರಾಮದಲ್ಲಿ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ದೇವಾಲಯದ ಆವರಣದಲ್ಲಿ ಬಂಡಿ ಓಟ ನಡೆಯಿತು.
ಬೆಳಿಗ್ಗೆಯಿಂದಲೇ ಹೂ ತಳಿರು ತೋರಣದಿಂದ ಸಿಂಗರಿಸಿದ್ದ ಬಂಡಿಯನ್ನು ದೇವಾಲಯದ ಆವರಣದಲ್ಲಿ ತಂದು ದೇವರಿಗೆ ಪೂಜೆ ಸಲ್ಲಿಸಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಒಳಗೆ ಮೆರಣಿಗೆ ಹೊರಡಿಸಲಾಯಿತು. ದೇವಾಲಯದ ಸ್ಥಳಕ್ಕೆ ಬಂದು ಪಟ್ಟಿಯಲ್ಲಿ ಹೆಸರು ನಮೂದು ಮಾಡಿದ ಜೊತೆ ಎತ್ತುಗಳಿಗೆ ಬಂಡಿಗೆ ಕಟ್ಟುವ ಮೂಲಕ ದೇವಾಲಯದ ಆವರಣದಲ್ಲಿ ಒಂದು ಸುತ್ತು ಓಡಿಸಲಾಯಿತು. ಹೀಗೆ ಸುಮಾರು ಜೊಡೆತ್ತು ಬಂಡಿ ಓಟದಲ್ಲಿ ಪಾಲ್ಗೊಂಡಿದ್ದವು. ಮಧ್ಯಾಹ್ನ 3 ರಿಂದ ಪ್ರಾರಂಭವಾಗಿ ಸಂಜೆ 6 ರ ತನಕ ಬಂಡಿ ಓಟ ನಡೆಯಿತು.
ಪಟ್ಟಣದ ಸಂತೆಮಾಳದ ಮಾರ್ಗವಾಗಿ ಬೀಡಹಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ದೇವಾಲಯಕ್ಕೆ 1 ಕಿ.ಮೀ ಇದ್ದು, ಅನ್ನದಾನ ಪ್ರಭುವಿನ ದೇವಾಲಯ ಎಂದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಖ್ಯಾತಿ ಪಡೆದಿರುವ ನಂದಿ ಬಸವೇಶ್ವರ ದೇವಾಲಯದಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, 15ನೇ ತಾರೀಕಿನ ಸೋಮವಾರ ಬೆಳಿಗ್ಗೆ 6.15 ರಿಂದ 7.30 ರವರೆಗೆ ದೇವಾಲಯದ ಮುಂಭಾಗ ಕೊಂಡೋತ್ಸವ ನಡೆಯಲಿದ್ದು, ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ತಮ್ಮ ಕಷ್ಟ ಕಾರ್ಪಣ್ಯ ನಿವಾರಣೆಗೆ ದೇವರಲ್ಲಿ ವಿನಂತಿಸಿಕೊಂಡರು. ಮಾ.19ರ ಶುಕ್ರವಾರ ಅನ್ನಸಂತರ್ಪಣೆ ನಡೆಯುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ.