ಬಾಗಲಕೋಟೆ: ಮಂಗಳವಾರ ತಡರಾತ್ರಿ ಟಿಪ್ಪರ್ ಹಾಗೂ ಟಂಟಂ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಬಸವರಾಜ ಚಿನ್ನಪ್ಪ ತೋರಗಲ್(25), ವಿಠಲ್ ಭೀಮಪ್ಪ ವಗ್ಗಾ(24) ಸಂಗಮೇಶ್ ಬಸವರಾಜ(25) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ನೂರಂದಪ್ಪ ಶಿವಕುಮಾರ ಲಕ್ಕುಂಡಿ(23) ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.