ರಾಯಚೂರು: ಬುಧವಾರ ಬೆಳಿಗ್ಗೆ ಚಿಂಚೋಡಿ ಪಕ್ಕ ಕೃಷ್ಣಾ ನದಿಯ ನೀರು ತುಂಬಿ ನಡುಗಡ್ಡೆಯಲ್ಲಿ ಸಿಲುಕಿದ್ದ ಆರು ಮಂದಿ ಕುರಿಗಾಹಿಗಳು ಮತ್ತು 200 ಕುರಿಗಳನ್ನು ಗುರುವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬೋಟ್ ಮೂಲಕ ಬುಧವಾರ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಬುಧವಾರ ಬೆಳಿಗ್ಗೆ ನೀರು ಕಡಿಮೆ ಪ್ರಮಾಣದಲ್ಲಿದೆ ಎಂದು ಕುರಿಗಾಹಿಗಳು ತಮ್ಮ ಗುರಿಗಳೊಂದಿಗೆ ನದಿ ತೀರಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಇದ್ದಕ್ಕಿದ್ದಂತೆ ನಾರಾಯಣಪುರ ಜಲಾಶಯದಿಂದ 1.05 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ಕುರಿಗಾಹೊಗಳಿಗೆ ಈಚೆ ಬರಲು ಅಸಾಧ್ಯವಾಗಿದೆ.
ಈ ವಿಚಾರ ಗ್ರಾಮಸ್ಥರಿಗೆ ಸಂಜೆ ವೇಳೆ ತಿಳಿದು ಬಂದಿದೆ. ಆ ಬಳಿಕ ಗ್ರಾಮಸ್ಥರು ತೆಪ್ಪದ ಮೂಲಕ 5 ಮಂದಿಯನ್ನು ರಕ್ಷಿಸಿದ್ದಾರೆ. ಸಂಜೆ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ತಾಲ್ಲೂಕು ತಹಸೀಲ್ದಾರ್, ಎಲ್ಲರನ್ನು ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿ ಹೋಗಿದ್ದರು. ಗುರುವಾರ ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಲಾಯಿತು.