ತುಮಕೂರು: ತುಮಕೂರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಜನರಲ್ಲಿ ಆತಂಕದ ಸ್ಥಿತಿ ಮೂಡಿಚಿತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆಯಲ್ಲಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರಿನ ಹನುಮಂತನಗರದಲ್ಲಿ ಗಂಗಣ್ಣ ಎಂಬವರ ಮನೆಯ ಕಾಂಪೌಂಡ್ನಲ್ಲಿ ಭಾನುವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ಕೊಟ್ಟು ಸೆರೆ ಹಿಡಿಯಲು ಮುಂದಾದರು. ಚಿರತೆಯನ್ನು ಹಿಡಿಯುವಲ್ಲಿ ಸಿಬ್ಬಂದಿ ಯಸಸ್ವಿಯಾಗಿದ್ದರು. ಆದರೆ ಸೆರೆ ಸಿಕ್ಕ ನಂತರವೂ ಆ ಚಿರತೆ ಮತ್ತೆ ಪರಾರಿಯಾಗಿತ್ತು. ಈ ವೇಳೆ ಆ ಚಿರತೆಗೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಹುಲ್ಲು ತಿನ್ನಿಸಲು ಹೋಗಿ ಅರಣ್ಯ ಸಿಬ್ಬಂದಿಯಿಂದ ಸರಿಯಾಗಿ ಗೂಸಾ ತಿಂದಿದ್ದ. ಪರಾರಿಯಾಗಿದ್ದ ಚಿರತೆಗೆ ಮತ್ತೆ ಬಲೆ ಬೀಸಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.