ನವದೆಹಲಿ ;ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, ಕೇಂದ್ರ ಸರ್ಕಾರ ತನ್ನ ಆಸ್ತಿಗಳನ್ನು ಮಾರಾಟ ಮಾಡುವುದರಲ್ಲಿ ಬ್ಯೂಸಿಯಾಗಿದ್ದು, ಜನರು ತಮ್ಮ ಸುರಕ್ಷತೆಯನ್ನು ತಾವೇ ನೋಡಿಕೊಳ್ಳಬೇಕು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಕಳೆದ 24 ಗಂಟೆಗಳಲ್ಲಿ ಕೋವಿಡ್ನ ಸೋಂಕು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಮುಂದಿನ ಅಲೆಯನ್ನು ನಿಯಂತ್ರಿಸಲು ಮತ್ತು ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಲಸಿಕಾ ಅಭಿಯಾನ ತೀವ್ರವಾಗಿ ಹೆಚ್ಚಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮಾರಾಟದಲ್ಲಿ ಬ್ಯೂಸಿಯಾಗಿದೆ. ಹಾಗಾಗಿ ಜನ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು, ಎಚ್ಚರವಾಗಿರಬೇಕು ಎಂದು ಉಲ್ಲೇಖಿಸಿದ್ದಾರೆ. 70 ವರ್ಷಗಳಿಂದ ಸಂಪಾದಿಸಲಾಗಿದ್ದ ಆಸ್ತಿಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಪೈಪ್ಲೈನ್ ಯೋಜನೆಯ ಖಾಸಗೀಕರಣವನ್ನು ಉಲ್ಲೇಖಿಸಿ ರಾಹುಲ್ಗಾಂಧಿ ಟೀಕೆ ಮಾಡಿದರು.
ಜನರೇ ಸ್ವಯಂ ಜಾಗೃತವಾಗಿರಿ, ಮೋದಿ ಸರ್ಕಾರದ ಆಸ್ತಿ ಮಾರಾಟದಲ್ಲಿ ಬ್ಯೂಸಿ ಆಗಿದ್ದಾರೆ : ರಾಹುಲ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.