ಮೈಸೂರು: ಕಬಿನಿ ಹಿನ್ನಿರಿನ ಅಂತರಸಂತೆ ಅರಣ್ಯಾ ವ್ಯಾಪ್ತಿಯ ಕಬಿನಿ ಹಿನ್ನಿರಿನ ಅಂತರಸಂತೆ ಅರಣ್ಯಾ ವ್ಯಾಪ್ತಿಯ ಕಾರಾಪುರದಲ್ಲಿರುವ ಜಂಗಲ್ ಲಾಡ್ಜೊಳಗೆ ಕಳೆದ 2 ದಿನಗಳಿಂದ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಹುಲಿ ಸೆರೆಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಾಗರ ಹೊಳೆ ರಾಷ್ಟೀಯ ಉದ್ಯಾನವನದ ಅಂತರಸಂತೆ ವ್ಯಾಪ್ತಿಯ ಕಾರಾಪುರ ಬಳಿಯ ಸರ್ಕಾರದ ಜಂಗಲ್ ಲಡ್ಜ್ ಆವರಣದೊಳಗೆ ಹುಲಿಯೊಂದು ಕಾಣಿಸಿಕೊಂಡಿದೆ. ಈ ಹುಲಿ ಸೆರೆಗಾಗಿ ಸಾಕಾನೆಗಳಾದ ಅರ್ಜುನ, ಅಭಿಮನ್ಯು, ಕೃಷ್ಣ ಆನೆಗಳ ನೆರವಿನಿಂದ ಕಳೆದ 2 ದಿನಗಳಿಂದ ಕಾರ್ಯಚರಣೆ ಮುಂದುವರೆಸಿದ್ದು, ಇಂದು ಸಹ ಕಾರ್ಯಾಚರಣೆ ಮುಂದುವರೆದಿದೆ.
ಈ ಮಧ್ಯೆ ಅರಣ್ಯ ಇಲಾಖೆ ಇಟ್ಟಿದ ಟ್ರ್ಯಾಕಿಂಗ್ ಕ್ಯಾಮಾರದಲ್ಲಿ ಹುಲಿ ಓಡಾಟದ ಚಿತ್ರ ಸೆರೆಯಾಗಿದ್ದು, ಹುಲಿ ಇರುವುದು ಖಚಿತವಾಗಿದೆ. ಈ ಹಿನ್ನಲ್ಲೆಯಲ್ಲಿ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಇಂದು ಸಹ ಕಾರ್ಯಾರಣೆ ಮುಂದುವರೆಸಿದ್ದು, ಜಂಗಲ್ ಲಾಡ್ಜ್ ನಲ್ಲಿ ಸಫಾರಿ ನೋಡಲು ಬಂದ ಸುಮಾರು 60 ಜನ ಪ್ರವಾಸಿಗರು ಆತಂಕದಲ್ಲಿದ್ದಾರೆ.
ಈ ಹಿನ್ನಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಈ ಭಾಗದಲ್ಲಿ ಹುಲಿಗಳ ಓಡಾಟ ಸಾಮಾನ್ಯವಾಗಿರುವುದರಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದು, ಹುಲಿಯನ್ನ ಸೆರೆ ಹಿಡಿದು ಅಥವಾ ಅರಣ್ಯಕ್ಕೆ ಓಡಿಸಲು ಕಾರ್ಯ ಇಂದು ಯಶಸ್ವಿಯಾಗಲಿದೆ ಎನ್ನುತ್ತಾರೆ.