News Karnataka Kannada
Friday, May 03 2024
ಕರ್ನಾಟಕ

ಜಂಗಲ್ ಲಾಡ್ಜ್ ಆವರಣದಲ್ಲಿ ಹುಲಿ- ಆತಂಕದಲ್ಲಿ ಪ್ರವಾಸಿಗರು

Photo Credit :

ಜಂಗಲ್ ಲಾಡ್ಜ್ ಆವರಣದಲ್ಲಿ ಹುಲಿ- ಆತಂಕದಲ್ಲಿ ಪ್ರವಾಸಿಗರು

ಮೈಸೂರು: ಕಬಿನಿ ಹಿನ್ನಿರಿನ ಅಂತರಸಂತೆ ಅರಣ್ಯಾ ವ್ಯಾಪ್ತಿಯ ಕಬಿನಿ ಹಿನ್ನಿರಿನ ಅಂತರಸಂತೆ ಅರಣ್ಯಾ ವ್ಯಾಪ್ತಿಯ ಕಾರಾಪುರದಲ್ಲಿರುವ ಜಂಗಲ್ ಲಾಡ್ಜೊಳಗೆ ಕಳೆದ 2 ದಿನಗಳಿಂದ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಹುಲಿ ಸೆರೆಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಾಗರ ಹೊಳೆ ರಾಷ್ಟೀಯ ಉದ್ಯಾನವನದ ಅಂತರಸಂತೆ ವ್ಯಾಪ್ತಿಯ ಕಾರಾಪುರ ಬಳಿಯ ಸರ್ಕಾರದ ಜಂಗಲ್ ಲಡ್ಜ್ ಆವರಣದೊಳಗೆ ಹುಲಿಯೊಂದು ಕಾಣಿಸಿಕೊಂಡಿದೆ. ಈ ಹುಲಿ ಸೆರೆಗಾಗಿ ಸಾಕಾನೆಗಳಾದ ಅರ್ಜುನ, ಅಭಿಮನ್ಯು, ಕೃಷ್ಣ ಆನೆಗಳ ನೆರವಿನಿಂದ ಕಳೆದ 2 ದಿನಗಳಿಂದ ಕಾರ್ಯಚರಣೆ ಮುಂದುವರೆಸಿದ್ದು, ಇಂದು ಸಹ ಕಾರ್ಯಾಚರಣೆ ಮುಂದುವರೆದಿದೆ.

ಈ ಮಧ್ಯೆ ಅರಣ್ಯ ಇಲಾಖೆ ಇಟ್ಟಿದ ಟ್ರ್ಯಾಕಿಂಗ್ ಕ್ಯಾಮಾರದಲ್ಲಿ ಹುಲಿ ಓಡಾಟದ ಚಿತ್ರ ಸೆರೆಯಾಗಿದ್ದು, ಹುಲಿ ಇರುವುದು ಖಚಿತವಾಗಿದೆ. ಈ ಹಿನ್ನಲ್ಲೆಯಲ್ಲಿ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಇಂದು ಸಹ ಕಾರ್ಯಾರಣೆ ಮುಂದುವರೆಸಿದ್ದು, ಜಂಗಲ್ ಲಾಡ್ಜ್ ನಲ್ಲಿ ಸಫಾರಿ ನೋಡಲು ಬಂದ ಸುಮಾರು 60 ಜನ ಪ್ರವಾಸಿಗರು ಆತಂಕದಲ್ಲಿದ್ದಾರೆ.

ಈ ಹಿನ್ನಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಈ ಭಾಗದಲ್ಲಿ ಹುಲಿಗಳ ಓಡಾಟ ಸಾಮಾನ್ಯವಾಗಿರುವುದರಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದು, ಹುಲಿಯನ್ನ ಸೆರೆ ಹಿಡಿದು ಅಥವಾ ಅರಣ್ಯಕ್ಕೆ ಓಡಿಸಲು ಕಾರ್ಯ ಇಂದು ಯಶಸ್ವಿಯಾಗಲಿದೆ ಎನ್ನುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು