News Karnataka Kannada
Sunday, April 28 2024
ಕರ್ನಾಟಕ

ಚುನಾಯಿತ ಪ್ರತಿನಿಧಿಗಳ ವರ್ತನೆ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೇಸರ

Venkaiah Naidu
Photo Credit :

ಬೆಂಗಳೂರು, ; ಚುನಾಯಿತ ಪ್ರತಿನಿಧಿಗಳ ವರ್ತನೆ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಎಫ್‌ಕೆಸಿಸಿಐ ಆಯೋಜಿಸಿದ್ದ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಜಯರಾಂ ಅವರಿಗೆ ನೀಡಿ ಗೌರವಿಸಿದ ನಂತರ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೆಲ ಸದಸ್ಯರ ಅನುಚಿತ ವರ್ತನೆಯನ್ನು ಉಲ್ಲೇಖಿಸಿ ಬೇಸರ ಹೊರ ಹಾಕಿದರು.
ರಾಜ್ಯಸಭೆ ಸೇರಿದಂತೆ ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳಲ್ಲು ಶಾಸಕರ ಅನುಚಿತ ವರ್ತನೆಗಳನ್ನು ಪ್ರಸ್ತಾಪಿಸಿದ ಅವರು, ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಿರಬೇಕು ಎಂದರು.ಜನಪ್ರತಿನಿಧಿಗಳ ನಡವಳಿಕೆ ಜನರಿಗೆ ಮಾದರಿಯಾಗಿರುವಂತೆ ಇದ್ದಾಗ ಮಾತ್ರ ಅವರು ರೋಲ್ ಮಾಡೆಲ್ ಆಗಿ ಇರುತ್ತಾರೆ. ಜನ ಮಾಧ್ಯಮಗಳಲ್ಲಿ ಜನಪ್ರತಿನಿಧಿಗಳ ವರ್ತನೆಯನ್ನು ಗಮನಿಸುತ್ತಾರೆ. ಅವರ ನಡವಳಿಕೆ ಕೆಟ್ಟದ್ದಾಗಿದ್ದಾಗ ಜನ ಅಸಹ್ಯ ಮತ್ತು ಬೇಸರ ಪಟ್ಟುಕೊಳ್ಳುತ್ತಾರೆ ಎಂದರು.
ಹಲವರು ನನ್ನನ್ನು ಯಾಕೆ ಬೇಸರದಲ್ಲಿದ್ದೀರ ಎಂದು ಕೇಳಿದರು. ಇತ್ತೀಚೆಗೆ ರಾಜ್ಯಸಭೆಯಲ್ಲಿ ನಡೆದಿದ್ದು ಬ್ಯಾಡ್, ಇದಕ್ಕೆ ನಾನು ಸ್ಯಾಡ್ ಎಂದು ಹೇಳಿದೆ ಎಂದವರು ತಮ್ಮ ಎಂದಿನ ಪ್ರಾಸಬದ್ಧ ಶೈಲಿಯಲ್ಲಿ ಹೇಳಿದರು.
ಕರ್ನಾಟಕ ಅದರಲ್ಲೂ ಬೆಂಗಳೂರಿನ ವಾತಾವರಣ ಅದ್ಭುತ ಎಲ್ಲೆಡೆ ಹಸಿರು ತಂಪು ಇದೆ. ಹಸಿರು ಬದುಕಿಗೆ ಖುಷಿ ನೀಡುತ್ತದೆ. ಬೆಂಗಳೂರಿನಲ್ಲೂ ನಾನು ಹಲವು ವರ್ಷ ಖುಷಿಯಿಂದ ಕಳೆದಿದ್ದೇನೆ. ಕರ್ನಾಟಕದ ಊಟ, ಜನ, ಮಣ್ಣು ಎಲ್ಲವೂ ತಮಗೆ ಅಚ್ಚುಮೆಚ್ಚು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು