ಮಂಡ್ಯ: ಕೋವಿಡ್ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ʻಮಜಾಭಾರತʼ ಕಾಮಿಡಿ ಶೋನಲ್ಲಿದ್ದ ಹಾಸ್ಯ ಕಲಾವಿದನನ್ನು ಪತ್ನಿ ಬಿಟ್ಟು ಹೋಗಿದ್ದಾರೆ.ಹಾಸ್ಯ ಕಲಾವಿದ ರವಿ ಪತ್ನಿ ಬೇಬಿ ತನ್ನ ಗಂಡನಿಗೆ ಕೈಕೊಟ್ಟು ಮೈಸೂರು ಮೂಲದ ಬೇರೊಬ್ಬನ ಜೊತೆ ವಿವಾಹವಾಗಿದ್ದಾರೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳಸಿದ್ದನಹುಂಡಿ ನಿವಾಸಿ ರವಿಯನ್ನು ಪತ್ನಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ರವಿ, ಪೊಲೀಸರಿಗೆ ದೂರು ನೀಡಿದ್ದಾನೆ. ಕಳೆದ 4 ವರ್ಷಗಳ ಹಿಂದೆ ರವಿ ಮತ್ತು ಬೇಬಿ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಈಗ ಪತಿ ಬಳಿ ದುಡ್ಡಿಲ್ಲ ಎಂದು ಪತ್ನಿ ಬಿಟ್ಟು ಬೇರೊಬ್ಬನೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ.
ಕೋವಿಡ್ ಸಂಕಷ್ಟ: ದುಡ್ಡಿಲ್ಲವೆಂದು ʻಮಜಾಭಾರತʼ ಕಲಾವಿದನನ್ನು ಬಿಟ್ಟು ಹೋದ ಪತ್ನಿ!
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.