News Karnataka Kannada
Saturday, May 04 2024
ಕರ್ನಾಟಕ

ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದ ಕಾರವಾರದ ನೌಕಾನೆಲೆ

Photo Credit :

ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದ ಕಾರವಾರದ ನೌಕಾನೆಲೆ

ಕಾರವಾರ: ದೇಶದಾದ್ಯಂತ‌ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಮುಂಬಯಿ, ಗುಜರಾತ್ ನೌಕಾಪಡೆ‌ ಸಜ್ಜಾದಂತೆ ಕಾರವಾರದ ಐಎನ್ಎಸ್ ನೌಕಾನೆಲೆ ಯು ಸಿದ್ದಗೊಂಡಿದೆ.

ಐಎನ್ಎಸ್ ವಿಕ್ರಮಾದಿತ್ಯ ಯದ್ಧವಾಹಕದಿಂದ ಸಿಡಿಮದ್ದು ಸಿಡಿಸಿ, ಗೌರವ ಸಲ್ಲಿಸಲು ತಯಾರಿ ಮಾಡಲಾಗಿದೆ. ಈಗಾಗಲೇ ದೇಶದ ವಿವಿಧ ಭಾಗದಲ್ಲಿ ನೌಕಾಪಡೆಯು ಪುಷ್ಪ ಮಳೆ, ಯುದ್ಧ ವಿಮಾನಗಳ ಪ್ರದರ್ಶನ ನಡೆಸಿದೆ.

ಐಎನ್ ಎಸ್ ವಿಕ್ರಮಾದಿತ್ಯ ನೌಕೆಯನ್ನು ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿದೆ ಎಂದು ಸೀಬರ್ಡ್ ನೌಕಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ್ ಕಪೂರ್ ತಿಳಿಸಿದ್ದಾರೆ.

ಅದರಂತೆ‌ ದೇಶದಲ್ಲೇ ಮೊದಲ ಬಾರಿಗೆ ಕಾರವಾರದ ನೌಕಾನೆಲೆಯ ಐಎನ್ಎಚ್ಎಸ್ ಪತಂಜಲಿ‌ ಆಸ್ಪತ್ರೆಯಲ್ಲಿ ಒಟ್ಟೂ 9 ಜನ ಭಟ್ಕಳದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಉತ್ತರ ಕನ್ನಡ‌ ಜಿಲ್ಲಾಡಳಿತದ ಕೋರಿಕೆಯಂತೆ‌ ಸಂಪೂರ್ಣವಾಗಿ ಸಹಕರಿಸಿದೆ. ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು