ಕಾಸರಗೋಡು: ಪ್ರವಾಹ ಸಂತ್ರಸ್ತರ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ, ಲೋಕಸೇವಾ ಆಯೋಗ ಪರೀಕ್ಷಾ ಅವ್ಯವಹಾರ ಸೇರಿದಂತೆ ಕೇರಳ ಸರಕಾರದ ವೈಫಲ್ಯ ಪ್ರತಿಭಟಿಸಿ ಯುಡಿಎಫ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ ಹತ್ತರಿಂದ ಬುಧವಾರ ಬೆಳಗ್ಗೆ ಹತ್ತರ ತನಕ ಧರಣಿ ನಡೆಯಲಿದೆ.
ಧರಣಿಯನ್ನು ಶಾಸಕ ಅಬ್ದುಲ್ ರಹಮಾನ್ ರಂಡತ್ತಾನಿ ಉದ್ಘಾಟಿಸಿದರು. ಶಾಸಕ ಎನ್. ಎ ನೆಲ್ಲಿಕುನ್ನು, ಮುಖಂಡರಾದ ಎಂ. ಸಿ ಖಮರುದ್ದೀನ್, ಹಕೀಮ್ ಕುನ್ನಿಲ್, ಎ. ಗೋವಿಂದನ್ ನಾಯರ್, ಸಿ ಟಿ ಆಹಮ್ಮದಾಲಿ, ಶಾಂತಮ್ಮ ಫಿಲಿಫ್, ಎ. ಅಬ್ದುಲ್ ರಹಮಾನ್, ಎ.ಜಿಸಿ ಬಶೀರ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.