News Karnataka Kannada
Monday, April 29 2024
ಕರ್ನಾಟಕ

ಕುಲಪತಿ ನೇಮಕ ವಿಳಂಬ ವಿಚಾರ ಸಿಎಂ ಗಮನಕ್ಕೆ ತರುತ್ತೇನೆ: ಗೋವಿಂದ ಕಾರಜೋಳ

Photo Credit :

ಕುಲಪತಿ ನೇಮಕ ವಿಳಂಬ ವಿಚಾರ ಸಿಎಂ ಗಮನಕ್ಕೆ ತರುತ್ತೇನೆ: ಗೋವಿಂದ ಕಾರಜೋಳ

ಕಲಬುರ್ಗಿ: ಕಲಬುರಗಿ ‌ವಿಶ್ವ ವಿದ್ಯಾಲಯದ ಕುಲಪತಿ ನೇಮಕದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತರುವೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ತ್ರೈಮಾಸಿಕ ಸಭೆ ನಡೆಸಲು ಕಲ್ಬುರ್ಗಿ ವಿ.ವಿಯ ಆವರಣಕ್ಕೆ ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ ಕೊರೊನಾ, ಅತಿವೃಷ್ಟಿಯು ಜಿಲ್ಲೆಯನ್ನು ಹೈರಾಣುಗೊಳಿಸಿತು. ಆದಾಗ್ಯೂ ಜಿಲ್ಲಾಡಳಿತ ಸಾಕಷ್ಟು ಶ್ರಮವಹಿಸಿ ಪರಿಹಾರ ಕಾರ್ಯಗಳನ್ನು ‌ಕೈಗೊಂಡಿತು. ಜನರನ್ನು ಸ್ಥಳಾಂತರಗೊಳಿಸುವಲ್ಲಿ ಹಾಗೂ ‌ಪರಿಹಾರ ಕೇಂದ್ರಗಳನ್ನು ತೆರೆದು ಉತ್ತಮ ‌ಕೆಲಸ ಮಾಡಿದೆ ಎಂದಿದ್ದಾರೆ.

ಸರ್ಕಾರಿ ‌ಕಚೇರಿಗಳಿಗೆ ಸಿಬ್ಬಂದಿ ತಡವಾಗಿ ಬಂದರೆ ಅಂಥವರ‌ ವಿರುದ್ಧ ಕ್ರಮ‌‌ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಈ ಸಮಯದಲ್ಲಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು