News Karnataka Kannada
Monday, May 20 2024
ಕರ್ನಾಟಕ

ಕುಡಿಯುವ ನೀರಿಗೆ ತೀವ್ರ ಬರ: ಅನಗತ್ಯ ಪಂಪ್ ನಿಯಂತ್ರಿಸಲು ಡಿಸಿ ಸೂಚನೆ

Photo Credit :

ಕುಡಿಯುವ ನೀರಿಗೆ ತೀವ್ರ ಬರ: ಅನಗತ್ಯ ಪಂಪ್ ನಿಯಂತ್ರಿಸಲು ಡಿಸಿ ಸೂಚನೆ

ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಗತ್ಯವಲ್ಲದೆ ಇರುವ ಪಂಪ್ ಹಾಕುವುದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.

ಮಂಜೇಶ್ವರ, ಕಾಸರಗೋಡು ಬ್ಲಾಕ್ ಗಳ ಉಪ್ಪಳ, ಶಿರಿಯ, ಮೊಗ್ರಾಲ್ ಪುತ್ತೂರು ಪ್ರದೇಶಗಳಲ್ಲಿ ನದಿಗಳಿಂದ ಕುಡಿಯುವ ನೀರನ್ನು ಪಂಪ್ ಮಾಡುವ ಪ್ರದೇಶಗಳಲ್ಲಿ ಕೆಳಗಡೆ ಮತ್ತು ಮೇಲ್ಗಡೆಗೆ 500 ಮೀಟರ್ ದೂರದಲ್ಲಿ ಪಂಪಿಂಗ್ ಗಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದನ್ನು ದುರ್ಬಳಕೆ ಮಾಡಿದರೆ ಸಂಪರ್ಕ ಕಡಿತಗೊಳಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಅಗತ್ಯಕ್ಕೆ ನಡೆಸುವ ನೀರಿನ ಪಂಪಿಂಗ್ ವ್ಯಾಪಕವಾಗಿ ದುರ್ಬಳಕೆಗೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬರ ಇನ್ನೂ ಹೆಚ್ಚಳಗೊಳ್ಳುವ ಭೀತಿಯಿದ್ದು, ಜಲ ದುರುಪಯೋಗ ಮಾಡದಂತೆ ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು