ಕಾಸರಗೋಡು: ರಾಷ್ಟೀಯ ಹೆದ್ದಾರಿ 66ರ ತಲಪಾಡಿ-ಚೆಂಗಳ ನಡುವೆ ಸೇರಿದಂತೆ ಒಟ್ಟು ಆರು ವಿಭಾಗಗಳ ರಸ್ತೆ ಅಭಿವೃದ್ಧಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಜಿಲ್ಲೆಯಲ್ಲಿ ತಲಪಾಡಿ-ಚೆಂಗಳ, ಚೆಂಗಳ-ನೀಲೇಶ್ವರ, ನೀಲೇಶ್ವರ-ತಳಿಪರಂಬ ನಡುವೆ ಮೂರು ವಿಭಾಗಗಳಾಗಿ ರಾಷ್ಟ್ರೀಯ ಹೆದ್ದಾರಿ ಆಭಿವೃದ್ಧಿಯಾಗಲಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಆರಂಭಗೊಳ್ಳಲಿದೆ.
6769 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೊಳ್ಳಲಿದೆ. ತಲಪಾಡಿ-ಚೆಂಗಳ ನಡುವೆ 39 ಕಿ. ಮೀ. , ಚೆಂಗಳ -ನೀಲೇಶ್ವರ ನಡುವೆ 37 ಕಿ. ಮೀ, ನೀಲೇಶ್ವರ-ತಳಿಪರಂಬ ನಡುವಿನ 40 ಕಿ ಮೀ ಅಭಿವೃದ್ದಿಯಾಗಲಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವ ವಿ . ಕೆ . ಸಿಂಗ್ , ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ ಸಚಿವ ಜಿ. ಸುಧಾಕರನ್, ಆರೋಗ್ಯ ಸಚಿವೆ ಕೆ .ಕೆ ಶೈಲಜಾ, ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ಸಂಸದರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎಂ . ಸಿ ಕಮರುದ್ದೀನ್ , ಜಿಲ್ಲಾ ಜೇಚ್ಚುವರಿ ದಂಡನಾಧಿಕಾರಿ ಎನ್ . ದೇವಿದಾಸ್ , ಉಪಜಿಲ್ಲಾಧಿಕಾರಿ ಕೆ . ಅಜೇಶ್ ಮೊದಲಾದವರು ಉಪಸ್ಥಿತರಿದ್ದರು.