ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಮುದ್ದು ಮುದ್ದಾದ ಚಿರತೆ ಮರಿಗಳು ಸಿಕ್ಕಿವೆ. ಮಂಡ್ಯ ತಾಲೂಕಿನ ಬಿ.ಹೊಸೂರು ಕಾಲೋನಿಯ ಗ್ರಾಮದಲ್ಲಿ ಮೂರು ಚಿರತೆ ಮರಿಗಳು ಕಾಣ ಸ್ಕಿಕವೆ.
ಗ್ರಾಮದ ಕುಮಾರಪ್ಪ ಎಂಬುವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಸಿಕ್ಕಿದ್ದು, ಅದನ್ನು ನೋಡಲು ಜನರು ಮುಗಿ ಬ್ದಿದ್ದಾರೆ. ಅಷ್ಟೆ ಅಲ್ಲದೆ ಚಿರತೆ ಮರಿಗಳನ್ನು ಎತ್ತಿಕೊಂಡು ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು-ತಾ ಮುಂದು ಅಂತ ಪೈಪೋಟಿ ನಡೆಸಿದ್ದಾರೆ.
ತರುವಾಯ ಗ್ರಾಮಸ್ಥರಿಂದ ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನು ಅರಣ್ಯಕ್ಕೆ ಬಿಡಲು ಅದನ್ನು ಕೊಂಡೊಯ್ದಿದ್ದಾರೆ. ತಾಯಿ ಚಿರತೆಯಿಂದ ಯಾರಿಗೂ ತೊಂದರೆ ಆಗಬಾರದೆಂದು ಅದೇ ಜಮೀನಿನಲ್ಲಿ ಸೆರೆ ಬೋನ್ ಇಟ್ಟಿದ್ದಾರೆ.