News Karnataka Kannada
Sunday, May 19 2024
ಕರ್ನಾಟಕ

ಕದ್ದು ಮುಚ್ಚಿ ಸಂಸಾರ…ಎರಡನೇ ಹೆಂಡತಿಗೆ ಮೊದಲ ಪತ್ನಿಯಿಂದ ಗೂಸ

Photo Credit :

ಕದ್ದು ಮುಚ್ಚಿ ಸಂಸಾರ...ಎರಡನೇ ಹೆಂಡತಿಗೆ ಮೊದಲ ಪತ್ನಿಯಿಂದ ಗೂಸ

ಹಾಸನ: ಸುಂದರವಾದ ಸಂಸಾರವಿದ್ದರೂ ಗಂಡ ಮತ್ತೊಂದು ಮದುವೆಯಾಗಿ ಇನ್ನೊಂದು ಸಂಸಾರ ಶುರುಮಾಡಿದ್ದ. ಈ ವಿಷಯ ತಿಳಿದ ಮೊದಲನೆ ಹೆಂಡತಿ, ಎರಡನೇ ಹೆಂಡತಿಯನ್ನು ಬೀದಿಯಲ್ಲೇ ದರ ದರನೆ ಎಳೆದಾಡಿದ್ದಾಳೆ.

ಈ ಘಟನೆ ಹಾಸನದಲ್ಲಿ ನಡೆದಿದ್ದು, ಗಂಡನ ಸಂಸಾರದ ಗುಟ್ಟು ಬೀದಿಗೆ ಬಿದ್ದಿದೆ. ಕಳೆದ 8 ವರ್ಷಗಳ ಹಿಂದೆ ಪ್ರಭಾಕರ್ ಹಾಗೂ ಸೌಮ್ಯ ಮದುವೆಯಾಗಿದ್ದರು ಒಬ್ಬ ಮಗ ಕೂಡಾ ಇದ್ದಾನೆ. ಹೀಗಿದ್ದರೂ ಪ್ರಭಾಕರ್ ಕೆಲ ವರ್ಷಗಳಿಂದ ವಿಜಯಲಕ್ಷಿ ಎಂಬಾಕೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಅನೇಕ ಬಾರಿ ನ್ಯಾಯ ಪಂಚಾಯ್ತಿ ಆಗಿದ್ದಲ್ಲದೆ, ವಿಚಾರ ಪೊಲೀಸರವರೆಗೂ ಹೋಗಿತ್ತು. ಇನ್ನು ಈ ಬಗ್ಗೆ ಪ್ರಭಾಕರ್ ಹಾಗೂ ಹಾಗೂ ವಿಜಯಲಕ್ಷ್ಮಿ ಕಳೆದ 20 ದಿನದ ಹಿಂದೆಯಷ್ಟೇ ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದರು.

ಇಷ್ಟಾದರೂ ಪ್ರಭಾಕರ್ ಹಳೇ ಚಾಳಿ ಬಿಟ್ಟಿರಲಿಲ್ಲ.  ಅಲ್ಲದೆ ಪ್ರಭಾಕರ್ ಹಾಗೂ ವಿಜಯಲಕ್ಷ್ಮಿ ಕದ್ದು ಮುಚ್ಚಿ ಮದುವೆಯೂ ಆಗಿದ್ದರು. ಈ ವಿಚಾರ ತಿಳಿದ ಮೊದಲನೆ ಹೆಂಡತಿ ಸೌಮ್ಯ, ಎರಡನೆ ಹೆಂಡತಿ ವಿಜಯಲಕ್ಷ್ಮಿ ಮನೆಗೆ ಹೋಗಿ ಆಕೆ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯಿಂದ ಹೊರಗಡೆ ಎಳೆದಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು