ಉಳ್ಳಾಲ: ಇಲ್ಲಿನ ಮೊಗವೀರಪಟ್ನ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ಉಳ್ಳಾಲದ ಜೀವರಕ್ಷಕರು ರಕ್ಷಣೆ ಮಾಡಿದ್ದಾರೆ.
ಶುಕ್ರವಾರ ಸಂಜೆ ಈ ಘಟನೆ ನಡೆಸಿದೆ. ಬೇಸಿಗೆ ರಜೆ ಆದುದರಿಂದ ಉಳ್ಳಾಲದ ಸಮುದ್ರದಲ್ಲಿ ಪ್ರವಾಸಿಗರು ಜಮಾಯಿಸುತ್ತಿದ್ದಾರೆ.
ಇಂದು ಸಂಜೆ ಜೀವರಕ್ಷಕರ ಮಾತನ್ನು ಕೇಳದೆ ಈಜಾಡಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕರಾವಳಿ ನಿಯಂತ್ರಣ ದಳದ ಪ್ರಸಾದ್ ಸುವರ್ಣ, ಜೀವರಕ್ಷಕ ಸಂಘದ ಶಶಿಧರ್ ಕರ್ಕೇರ, ನವೀನ್ ಅಮೀನ್, ಜಿತೇಂದ್ರ ಬಂಗೇರ, ಮೋಹನ್ ಪುತ್ರನ್, ಸುರೇಶಱ ತಂಡದವರು ಆಗುವ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಿದ್ದಾರೆ.