ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 23 ಡೆಡ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಕಾರವಾರ 10, ಭಟ್ಕಳ 1, ಶಿರಸಿ 1, ಯಲ್ಲಾಪುರ 2, ಸಿದ್ದಾಪುರ 5, ಮುಂಡಗೋಡ 1, ಹಳಿಯಾಳ 1, ಹೊನ್ನಾವರ 2 ಜನರಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕು ಪತ್ತೆಯಾದವರ ಪೈಕಿ 16 ಪುರುಷರು ಹಾಗೂ ಏಳು ಜನ ಮಹಿಳೆಯರು. ಈ ಪೈಕಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸಿಬ್ಬಂದಿ 25ರ ಯುವಕ, ಲ್ಯಾಬ್ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ಮುದಗಾದ 21 ವರ್ಷದ ಯುವಕನಿಗೆ ಸೋಕು ತಗುಲಿದೆ.
ಅದರಂತೆ ಚೆಂಡಿಯಾದ 21 ವರ್ಷದ ಯುವಕನಲ್ಲೂ ಸೋಂಕು ಪತ್ತೆಯಾಗಿದ್ದು ಇತ ಬೆಂಗಳೂರಿನಿಂದ ವಾಪಸ್ಸಾಗಿದ್ದ ಅದರಂತೆ ಬಿಣಗಾದ ಗ್ರಾಸಿಮ್ ಬಿರ್ಲಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ವರ್ಷದ ವ್ಯಕ್ತಿ, 27 ವರ್ಷದ ಬಿಣಗಾದ ಯುವಕನಲ್ಲಿ ಸೋಂಕು ದೃಢವಾಗಿದ್ದು ಈತ ಬೆಂಗಳೂರಿನಿಂದ ಬಂದಿದ್ದಾನೆ. 30ರ ಮಹಿಳೆ ಮುದಗಾ ಕಾಲನಿ, ಅಂಡಮಾನ ನಿಕೋಬಾರ್ ನಿಂದ ವಾಪಸ್ಸಾದ ಕೋಡಿಭಾಗದ 43 ವರ್ಷದ ಪುರುಷ ಹಾಗೂ ಇರಾಕ್ ದೇಶದಿಂದ ವಾಪಸ್ಸಾದ 27,26, 28ರ ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಇರುವ ಕಾರವಾರ ಭದ್ರಾ ಹೊಟೇಲ್ ನಲ್ಲಿ ಕ್ವಾರಂಟೈನ್ ಇದ್ದರು. ಇವರನ್ನು ಚಿಕಿತ್ಸೆಗಾಗಿ ಕಿಮ್ಸ್ ಗೆ ಸ್ಥಳಾಂತರ ಮಾಡಲಾಗಿದೆ.
ಸಿದ್ದಾಪುರ ತಾಲೂಕಿನಲ್ಲಿ 5 ಪ್ರಕರಣಗಳು ಪತ್ತೆಯಾಗಿದೆ. ಗುಂಜಿಗೋಡದ 23 ವರ್ಷದ ಯುವಕ, ಹೊಸೂರಿನ 24ರ ಮಹಿಳೆ, ಲಾಂಬಾಪುರದ 24 ವರ್ಷದ ಯವತಿ ಬೆಂಗಳೂರಿನಿಂದ ವಾಪಸ್ಸಾಗಿದ್ದರು. ಅದರಂತೆ ತಾಲೂಕಾಸ್ಪತ್ರೆಯ ಆರೋಗ್ಯ ಸಿಬ್ಬಂದಿ 56, 59ರ ವ್ಯಕ್ತಿಯಲ್ಲಿ ಸೋಂಕಿ ದೃಢಪಟ್ಟಿದೆ. ಯಲ್ಲಾಪುರದ ರವೀಂದ್ರ ನಗರ 22ರ ಯುವತಿ, ಹಾಗೂ ಕಲ್ಲಮ್ಮ ನಗರ 23 ರ ಯುವತಿಯಲ್ಲೂ ಸೋಂಕಿದ್ದು ಪ್ರಯಾಣದ ಇತಿಹಾಸ ಪತ್ತೆ ಮಾಡಲಾಗುತ್ತಿದೆ.
ಹೊನ್ನಾವರ ತಾಲೂಕಿನ ಇಂದಿರಾ ನಗರ ಹಳದೀಪುರದ 45 ರ ಮಹಿಳೆ ಸೋಂಕಿತನ ಪ್ರಾಥಮಿಕ ಸಂಪರ್ಕ, 25ರ ಯುವಕನಿಗೂ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಭಟ್ಕಳ ತಾಲೂಕಿನ ಹಿಂದು ಕಾಲನಿಯ 44 ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಈತ ವಿಜಯವಾಡಾದಿಂದ ವಾಪಸ್ಸಾಗಿದ್ದಾನೆ. ಶಿರಸಿಯ ಮಂಜಿಕೇರಿಯ 43 ರ ಮಹಿಳೆ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಮುಂಗಡೋಡ ತಾಲೂಕಿನ ನಾಗ್ನೂರು 20ರ ಯುವಕ ಬೆಂಗಳೂರಿನಿಂದ ವಾಪಸ್ಸಾಗಿದ್ದಾನೆ. ಹಳಿಯಾಳದ ಲಕ್ಷ್ಮಗಲ್ಲಿ ಕಾರ್ಲಕಟ್ಟಾದ 60 ರವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಈತ ಗೋವಾದಿಂದ ವಾಪಸ್ಸಾಗಿದ್ದಾನೆ.
ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 512 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಇಬ್ಬರು ಮೃತಟ್ಟಿದ್ದು 210 ಜನರ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅದರಂತೆ 300 ಪ್ರಕರಣಗಳು ಸಕ್ರಿಯವಾಗಿದೆ.