ಪುತ್ತೂರು: ಮದ್ರಸ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿಯೋರ್ವರಿಗೆ ಮದ್ರಸ ಗುರುಗಳಾದ ಉಸ್ತಾದ್ರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಗೆ ನೊಂದ ಬಾಲಕ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡಿದ್ದಲ್ಲದೆ ಆರೋಪಿ ಮದ್ರಸ ಗುರುವನ್ನು ಬಂಧಿಸಿದ್ದಾರೆ.
ಘಟನೆಯು ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ನಡೆದಿದ್ದು, ಇದೀಗ ನೊಂದ ವಿದ್ಯಾರ್ಥಿ ತಡವಾಗಿ ನೀಡಿದ ದೂರಿನಂತೆ ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಹಿಮಾಯುತುಲ್ ಇಸ್ಲಾಂ ಮದರಸದಲ್ಲಿ ಉಸ್ತಾದರಾಗಿರುವ ಆರೋಪಿ ಮೊಟ್ಟೆತ್ತಡ್ಕ ನಿವಾಸಿ ಅನ್ವರ್ ಮೌಲವಿ(41ವ)ರವರನ್ನು ಪೊಲೀಸು ಮೇ 17ರಂದು ಸಂಜೆ ಬಂಧಿಸಿದ್ದಾರೆ.
ಘಟನೆ ವಿವರ: ಮಾ. 3ರಂದು ಸಂಜೆ ಪುರುಷರಕಟ್ಟೆ ಮದ್ರಸದ ನೆರೆಯ ವ್ಯಕ್ತಿಯೊಬ್ಬರು ನೊಂದ ವಿದ್ಯಾರ್ಥಿಯ ಮೂಲಕ ಮದ್ರಸದ ಉಸ್ತಾದ್ ಅನ್ವರ್ ಮೌಲವಿಗೆ ಚಹಾ-ತಿಂಡಿ ಕಳುಹಿಸಿಕೊಟ್ಟಿದ್ದರು. ವಿದ್ಯಾರ್ಥಿ ಚಹಾ ತಿಂಡಿ ಕೊಡಲು ಹೋದ ವೇಳೆ ಆರೋಪಿ ಉಸ್ತಾದ್ ಅವರು ಮದ್ರಸದ ಬಾಗಿಲು ಹಾಕಿಕೊಂಡು ಒಳಗಡೆ ವಿದ್ಯಾರ್ಥಿಗೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸಿ ಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಘಟನೆಯ ಬಳಿಕ ಏ. 7ರಂದು ಬೆಳಿಗ್ಗೆ ಮದ್ರಸ ಶಾಲೆ ಬಿಟ್ಟ ಬಳಿಕ ಆರೋಪಿ ಉಸ್ತಾದ್ ವಿದ್ಯಾರ್ಥಿಯನ್ನು ಮದ್ರಸದಿಂದ ಹೊರಗೆ ಹೋಗದಂತೆ ಬಾಗಿಲು ಹಾಕಿಕೊಂಡು ಮತ್ತೊಮ್ಮೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆಯೊಡ್ಡಿದ್ದಾರೆ. ನೊಂದ ಬಾಲಕ ಮದರಸ ಕಲಿಕೆಗೆ ಹಾಗೂ ನಮಾಝ್ಗಾಗಿ ಮಸೀದಿಗೆ ಹೋಗದೇ ಇದ್ದುದನ್ನು ಗಮನಿಸಿ ತಾಯಿ ಮೇ 16ರಂದು ವಿಚಾರಿಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮೇ 17ರಂದು ಅವರು ಪುತ್ರನ ಮೂಲಕ ಪೊಲೀಸರಿಗೆ ದೂರು ನಿಡಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ತಡವಾಗಿ ದೂರನ್ನು ಸ್ವೀಕರಿಸಿ ಆರೋಪಿಯ ವಿರುದ್ದ ಪೋಸ್ಕೋ ಪ್ರಕರಣದಡಿ ಕಾಲಂ 377, 342 ಮತ್ತು ಬೆದರಿಕೆಗೆ ಸಂಬಂಧಿಸಿ 506 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯ ಉಸ್ತಾದ್ ಬಂಧನ
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ದಿ.ಅಬ್ದುಲ್ಲಾ ಅವರ ಪುತ್ರ ಪುರುಷರಕಟ್ಟೆಯಲ್ಲಿರುವ ಹಿಮಾಯುತುಲ್ ಇಸ್ಲಾಂ ಮದರಸದಲ್ಲಿ ಉಸ್ತಾದರಾಗಿರುವ ಆರೋಪಿ ಉಸ್ತಾದ್ ಅನ್ವರ್ ಮೌಲವಿ ಅವರನ್ನು ಪೊಲೀಸರು ಮೇ 17ರಂದು ಸಂಜೆ ಪುರುಷರ ಕಟ್ಟೆ ಮಸೀದಿ ಬಳಿಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.