ಕಾರವಾರ: ಸುಮಾರು ಎರಡು ಎಕರೆ ಅಡಿಕೆ ತೋಟಕ್ಕೆ ಕೊಳೆ ರೋಗ ಬಂದು ಲಕ್ಷಾಂತರ ರೂ. ನಷ್ಟವಾಗಿದ್ದ ಹಿನ್ನೆಲೆಯಲ್ಲಿ ರೈತರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಯಿಮನೆ ಗ್ರಾಮದಲ್ಲಿರುವ ತೋಟದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ.
ಚಂದ್ರಶೇಖರ್ ನಾರಾಯಣ ಭಟ್(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ಸಹಕಾರಿ ಸಂಘದಲ್ಲಿ 2.50 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಈ ಸಲ ಭಾರೀ ಮಳೆಯಾಗಿದ್ದರಿಂದ ಚಂದ್ರಶೇಖರ್ ಅವರ ಎರಡು ಎಕರೆ ಅಡಿಕೆ ತೋಟದ ಫಸಲಿಗೆ ಕೊಳೆ ರೋಗ ಬಂದಿದೆ.
ಸಾಲಭಾದೆಯ ಹಿನ್ನೆಲೆಯಲ್ಲಿ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.