News Karnataka Kannada
Sunday, April 28 2024
ಕರ್ನಾಟಕ

ಅಡಿಕೆಗೆ ಕೊಳೆ ರೋಗ: ರೈತ ಆತ್ಮಹತ್ಯೆ

Photo Credit :

ಅಡಿಕೆಗೆ ಕೊಳೆ ರೋಗ: ರೈತ ಆತ್ಮಹತ್ಯೆ

ಕಾರವಾರ: ಸುಮಾರು ಎರಡು ಎಕರೆ ಅಡಿಕೆ ತೋಟಕ್ಕೆ ಕೊಳೆ ರೋಗ ಬಂದು ಲಕ್ಷಾಂತರ ರೂ. ನಷ್ಟವಾಗಿದ್ದ ಹಿನ್ನೆಲೆಯಲ್ಲಿ ರೈತರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಯಿಮನೆ ಗ್ರಾಮದಲ್ಲಿರುವ ತೋಟದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ.

ಚಂದ್ರಶೇಖರ್ ನಾರಾಯಣ ಭಟ್(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ಸಹಕಾರಿ ಸಂಘದಲ್ಲಿ 2.50 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಈ ಸಲ ಭಾರೀ ಮಳೆಯಾಗಿದ್ದರಿಂದ ಚಂದ್ರಶೇಖರ್ ಅವರ ಎರಡು ಎಕರೆ ಅಡಿಕೆ ತೋಟದ ಫಸಲಿಗೆ ಕೊಳೆ ರೋಗ ಬಂದಿದೆ.

ಸಾಲಭಾದೆಯ ಹಿನ್ನೆಲೆಯಲ್ಲಿ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು