ದಕ್ಷಿಣ ಕನ್ನಡ : ಸದ್ಯಕ್ಕೆ ರಾಜ್ಯಕ್ಕೆ ಮಳೆ ತರುವ ವಾಯುಭಾರ ಕುಸಿತ ಅಥವಾ ಚಂಡಮಾರುತದ ಲಕ್ಷಣಗಳಿಲ್ಲ , ಹೀಗಾಗಿ ತೇವಾಂಶ ಏರಿಕೆ ಆದ್ರೆ ಮಾತ್ರ ಮಳೆಯಾಗಲಿದೆ. ಬೇಸಿಗೆ ಮಳೆಯ ಅಬ್ಬರ ಇನ್ನು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಬಹಳಷ್ಟಿದೆ. ಕರಾವಳಿ ಸೇರಿದಂತೆ ಮಲೆನಾಡು, ರಾಜ್ಯದ ಬಹುಭಾಗದಲ್ಲಿ ಬೇಸಿಗೆ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಸುರಿಯುವ ಸಾಧ್ಯತೆಯಿದೆ.

ರಾಜ್ಯದ ನಾನಾ ಕಡೆಗಳಲ್ಲಿ ನಿರೀಕ್ಷೆಯಂತೆ ಬೇಸಿಗೆ ಮಳೆ ಬಂದು ಇಳೆ ತಣ್ಣಗಾಗಿದೆ. ಆದರೆ ಇನ್ನು ಬೇಸಿಗೆ ಮಳೆ ಬರಬೇಕಾದರೆ ವಾತಾವರಣದಲ್ಲಿ ತೇವಾಂಶದಲ್ಲಿ ಏರಿಕೆಯಾದರೆ ಮಾತ್ರ ಸಾಧ್ಯತೆ ಸೃಷ್ಟಿಯಾಗಲಿದೆ. ಇದರ ಹೊರತಾಗಿ ವಾಯುಭಾರ ಕುಸಿತ ಅಥವಾ ಚಂಡಮಾರುತದ ಲಕ್ಷಣಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಪ್ರಕಾರ ವಾತಾವರಣದಲ್ಲಿ ತೇವಾಂಶ ಶೇ.70 ಆರ್‌ಎಚ್‌ಗಿಂತ ಹೆಚ್ಚಾದರಷ್ಟೇ ಬೇಸಿಗೆ ಮಳೆಯ ಲಕ್ಷಣಗಳು ಇರಬಹುದು. ಈಗಾಗಲೇ ಬೇಸಿಗೆ ಮಳೆ ಬಂದ ಕಾರಣದಿಂದ ವಾತಾವರಣದ ತೇವಾಂಶ ಶೇ.40 ಆರ್‌ಎಚ್‌ಗೆ ಬಂದು ತಲುಪಿದೆ. ಸಾಮಾನ್ಯವಾಗಿ ಶೇ.40ರಿಂದ 70ರ ಅಸುಪಾಸಿನಲ್ಲಿ ಇದ್ದರೆ ಮಳೆ ಸಾಧ್ಯತೆ ಇರೋದಿಲ್ಲ. ಆದರೆ ಈ ಗಡಿಯನ್ನು ದಾಟಿಕೊಂಡು ಮುಂದೆ ಹೋದರಷ್ಟೇ ಬೇಸಿಗೆ ಮಳೆ ಬರಬಹುದು.

”ಬೇಸಿಗೆ ಮಳೆಯ ಅಬ್ಬರ ಇನ್ನು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಬಹಳಷ್ಟಿದೆ. ಕರಾವಳಿ ಸೇರಿದಂತೆ ಮಲೆನಾಡು, ರಾಜ್ಯದ ಬಹುಭಾಗದಲ್ಲಿ ಬೇಸಿಗೆ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಸುರಿಯುವ ಸಾಧ್ಯತೆಯಿದೆ. ಹಿಂದೂ ಮಹಾಸಾಗರದಲ್ಲಿ ವಾಯಭಾರಕುಸಿತ, ಚಂಡಮಾರುತದ ಅಬ್ಬರ ಕಾಣಿಸಿಕೊಳ್ಳದೇ ಇದ್ದರೆ ಈ ಬಾರಿ ಮುಂಗಾರು ಕೂಡ ನಿರೀಕ್ಷೆಗಿಂತ ಮೊದಲೇ ಬರಬಹುದು,” ಎಂದು ಹವಾಮಾನ ತಜ್ಞರ ಅಭಿಪ್ರಾಯ .

ಉಷ್ಣತೆಯಲ್ಲಿಮತ್ತೆ ಏರಿಕೆಯಾಗಬಹುದು. ಈಗಾಗಲೇ ಮಳೆಯಾದ ಕೆಲವು ಭಾಗದಲ್ಲಿ30ರಿಂದ 34 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಇನ್ನು ಮುಂದಿನ ದಿನಗಳಲ್ಲಿ ಅದು 38ರಿಂದ 40 ಡಿಗ್ರಿ ತನಕವೂ ಹೋಗಬಹುದು. ಉಷ್ಣತೆ ಏರುತ್ತಾ ಹೋದಂತೆ ತೇವಾಂಶವೂ ಏರಿಕೆಯಾಗಿ ಬೇಸಿಗೆ ಮಳೆಗೆ ಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಜಾಸ್ತಿಯಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಗ್ರಾಮಾಂತರ ಭಾಗವಾದ ಸುಳ್ಯ, ಸುಬ್ರಹ್ಮಣ್ಯ, ಕಡಬ ಸೇರಿದಂತೆ ಅದರ ಸುತ್ತಮುತ್ತಲಿರುವ ನಾನಾ ಕಡೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಗುಡುಗು, ಸಿಡಿಲಿನ ಜತೆಯಲ್ಲಿ ಸಂಜೆ ಹೊತ್ತು ಕಾಣಿಸಿಕೊಂಡರೆ ಉಳಿದಂತೆ ನಗರ ಭಾಗದಲ್ಲಿ ಒಂದೆರಡು ಜೋರು ಮಳೆ ಬಂದರೆ ಬಿಟ್ಟರೆ ಬಿಸಿಲಿನ ಅಬ್ಬರವೇ ಜಾಸ್ತಿಯಾಗಿ ಕಾಣಿಸಿಕೊಂಡಿದೆ.

ಬಹುಮುಖ್ಯವಾಗಿ ನಗರ ಭಾಗದಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಬಿಸಿಲಿನ ಪ್ರಭಾವ ಕೂಡ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಗ್ರಾಮಾಂತರ ಭಾಗದಲ್ಲಿ ಬಿಸಿಲಿನ ಜತೆಗೆ ಮಳೆ ಕೂಡ ಜತೆಗೂಡುವುದರಿಂದ ಹವಾಮಾನ ಕೂಡ ಸಾಕಷ್ಟು ಉತ್ತಮವಾಗಿದೆ.

ಕಳೆದ ಎರಡು ದಿನಗಳಲ್ಲಿದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿಮುಂಜಾನೆ ಹೊತ್ತು ದಿಢೀರ್‌ ಮಂಜಿನ ವಾತಾವರಣ(ಕಾಡುಹೊಗೆ) ಸೃಷ್ಟಿಯಾಗಿದೆ. ಆದರೆ ಜಾಸ್ತಿ ಮಳೆಯಾದ ಭಾಗದಲ್ಲಿಈಗಾಗಲೇ ಬಿಸಿಲು ಇತ್ತು. ನೀರಿನಾಂಶ ಕೊರತೆಯಾಗಿತ್ತು. ಇಂತಹ ಕಡೆಯಲ್ಲಿಉತ್ತಮ ಮಳೆಯಾಗಿ ಮರುದಿನ ಮುಂಜಾನೆ ಕೆಲವು ಭಾಗದಲ್ಲಿಮಂಜು ಕವಿದ ವಾತಾವರಣ ನಿರ್ಮಾಣವಾಗುತ್ತದೆ.

ಸೂರ್ಯನ ಕಿರಣಗಳು ಈ ಭಾಗದಲ್ಲಿಬಿದ್ದಾಗ ಮಂಜು ಆವಿಯಾಗುತ್ತದೆ. ಇದು ಚಳಿಗಾಲದ ಮಂಜು ಅಲ್ಲ. ಕೆಲವೊಂದು ಸಲ ಇಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವಾತಾವರಣದಲ್ಲಿಕೊಂಚ ಉಷ್ಣತೆ, ತೇವಾಂಶ ಏರಿಕೆಯಾಗಬಹುದು ಎಂದು ಐಎಂಡಿ ವಿಜ್ಞಾನಿಗಳು ಹೇಳುತ್ತಾರೆ.