Bengaluru 26°C
Ad

ಕೇದರ್‌ನಾಥ ದೇಗುಲದಲ್ಲಿ ಬೃಹತ್‌ ಪ್ರಮಾಣದ ಹಿಮಪಾತ : ವಿಡಿಯೋ ವೈರಲ್‌

ಉತ್ತರಾಖಂಡದ ಕೇದಾರನಾಥ ದೇಗುಲ ಸಮೀಪ ರವಿವಾರ ಬೃಹತ್‌ ಪ್ರಮಾಣದಲ್ಲಿ ಹಿಮಪಾತವಾಗಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಉಂಟಾಗಿಲ್ಲ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಖಚಿತಪಡಿಸಿದೆ.

ರುದ್ರಪ್ರಯಾಗ: ಉತ್ತರಾಖಂಡದ ಕೇದಾರನಾಥ ದೇಗುಲ ಸಮೀಪ ರವಿವಾರ ಬೃಹತ್‌ ಪ್ರಮಾಣದಲ್ಲಿ ಹಿಮಪಾತವಾಗಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಉಂಟಾಗಿಲ್ಲ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಖಚಿತಪಡಿಸಿದೆ.

Ad
300x250 2

ಕೇದಾರನಾಥ ಸೇರಿದಂತೆ ಸಂಪೂರ್ಣ ಪ್ರದೇಶ ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕೇದಾರನಾಥ ದೇಗುಲದಿಂದ 4 ಕಿ.ಮೀ. ದೂರ ಇರುವ ಗಾಂಧಿ ಸರೋವರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ರವಿವಾರ ಬೆಳಗ್ಗೆ 5 ಗಂಟೆಗೆ ಈ ಘಟನೆ ನಡೆದಿದೆ. ಹಿಮಪಾತ ಆಗುವ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ವೈರಲ್‌ ಆಗಿದೆ. 2022ರ ಸೆಪ್ಟಂಬರ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ 3 ಬಾರಿ ಅಲ್ಲಿ ಹಿಮಪಾತವಾಗಿತ್ತು.

https://x.com/PTI_News/status/1807341098999669067

Ad
Ad
Nk Channel Final 21 09 2023
Ad