ಮಣಿಪುರ: ಜಿರಿಬಾಮ್ನಲ್ಲಿ ಸಿಆರ್ಪಿಎಫ್, ಪೊಲೀಸರ ಜಂಟಿ ಪಡೆಯ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದು, ಓರ್ವ ಯೋಧ ಮೃತೊಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 9.40ರ ಸುಮಾರಿಗೆ ದಾಳಿ ನಡೆಸಿದ್ದಾರೆ.
ಬೆಟಾಲಿಯನ್ ಸಿಆರ್ಪಿಎಫ್ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡದ್ದ ವೇಳೆಯಲ್ಲಿ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.
ಇನ್ನು ಈ ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಯೋಧ ಸಿಆರ್ಪಿಎಫ್ನ ಭಾಗವಾಗಿದ್ದರು. ಅವರನ್ನು ಬಿಹಾರದ ನಿವಾಸಿ ಅಜಯ್ ಕುಮಾರ್ ಝಾ ಎಂದು ಗುರುತಿಸಲಾಗಿದೆ.

