ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶುಕ್ರವಾರ ರಾತ್ರಿ ಜೆ & ಕೆ ಪೊಲೀಸ್ ಸೇವೆಗಳ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ಶ್ರೀನಗರ, ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳಿಗೆ ಹೊಸ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಮತ್ತು ಹಂದ್ವಾರದ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಿದೆ. ಕೇಂದ್ರ ಚುನಾವಣಾ ಆಯೋಗದ ಅನುಮೋದನೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ.
ಗೃಹ ಪ್ರಧಾನ ಕಾರ್ಯದರ್ಶಿ ಚಂದ್ರಾಕರ್ ಭಾರ್ತಿ ಅವರು ಹೊರಡಿಸಿರುವ ಆದೇಶದ ಪ್ರಕಾರ, ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರಿಗೆ ಹೊಸ ಹುದ್ದೆಗಳನ್ನು ನೀಡಲಾಗಿದೆ. ಶ್ರೀನಗರ, ಬಾರಾಮುಲ್ಲಾ, ಕುಪ್ವಾರ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹಂದ್ವಾರ ಎಸ್ಪಿಯನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಬುಧವಾರ ನಿರ್ದೇಶನ ನೀಡಿತ್ತು. ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿಗಳ ಸಮಿತಿಯನ್ನು ಸಲ್ಲಿಸುವಂತೆ ಆಡಳಿತಕ್ಕೆ ಸೂಚನೆ ನೀಡಿದೆ.
ಜೆಕೆಪಿಎಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಅವರನ್ನು ಎಸ್ಎಸ್ಪಿ ಶ್ರೀನಗರ, ಮೊಹಮ್ಮದ್ ಝೈದ್ ಅವರನ್ನು ಎಸ್ಎಸ್ಪಿ ಬಾರಾಮುಲ್ಲಾ, ಗುಲಾಮ್ ಜೀಲಾನಿ ವಾನಿ ಅವರನ್ನು ಎಸ್ಎಸ್ಪಿ ಕುಪ್ವಾರಾ ಮತ್ತು ಇಫ್ರೋಜ್ ಅಹ್ಮದ್ ಅವರನ್ನು ಎಸ್ಪಿ ಹಂದ್ವಾರಾ ಆಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಐಪಿಎಸ್ ಅಧಿಕಾರಿಗಳಾದ ಗುರುಂದರ್ಪಾಲ್ ಸಿಂಗ್ ಮತ್ತು ಶೋಭಿತ್ ಸಕ್ಸೇನಾ ಅವರನ್ನು ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳ ಎಸ್ಎಸ್ಪಿಗಳ ಹುದ್ದೆಯಿಂದ ಕ್ರಮವಾಗಿ ಪೊಲೀಸ್ ಟೆಲಿಕಮ್ಯುನಿಕೇಷನ್ಸ್ ಮತ್ತು ಎಸ್ಎಸ್ಪಿ ಸಿಐಡಿ ಪ್ರಭಾರಿ ನಿರ್ದೇಶಕರಾಗಿ ಮರು ನಿಯೋಜಿಸಲಾಗಿದೆ. ದಾವೂದ್ ಅಯೂಬ್, ಎಸ್ಪಿ ಹಂದ್ವಾರ ಅವರನ್ನು ಎಸ್ಎಸ್ಪಿ ಸಿಐಡಿ ಪ್ರಧಾನ ಕಚೇರಿಯಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಜೆ & ಕೆ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರದಲ್ಲಿ, ಆಯೋಗವು ಮೊಹಮ್ಮದ್ ಝೈದ್ ಅವರನ್ನು ಎಸ್ಎಸ್ಪಿ ಬಾರಾಮುಲ್ಲಾ, ಗುಲಾಮ್ ಜೀಲಾನಿ ವಾನಿ ಅವರನ್ನು ಎಸ್ಎಸ್ಪಿ ಕುಪ್ವಾರಾ, ಇಫ್ರೋಜ್ ಅಹ್ಮದ್ ಎಸ್ಪಿ ಹಂದ್ವಾರ ಮತ್ತು ಇಮ್ತಿಯಾಜ್ ಹುಸೇನ್ ಮಿರ್ ಅವರನ್ನು ಶ್ರೀನಗರದ ಎಸ್ಎಸ್ಪಿ ಹುದ್ದೆಗೆ ಅನುಮೋದಿಸಿದೆ.

