ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆ ಆಗಿರುವ ನಟಿ ಕಂಗನಾ ರಣಾವತ್ ಅವರ ಮೇಲೆ ಭದ್ರತಾ ಸಿಬ್ಬಂದಿ ಕೈ ಮಾಡಿದ್ದಾರೆ. ಈ ಬಗ್ಗೆ ಕಂಗನಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪಂಜಾಬ್ನಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಅದು ಕಳವಳಕಾರಿ ಸಂಗತಿ. ಹಲ್ಲೆ ನಡೆದ ಬಳಿಕ ನಾನು ಆರಾಮವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಘಟನೆ ಬಳಿಕ ವಿಡಿಯೊ ಮೂಲಕ ಪ್ರತಿಕ್ರಿಯಿಸಿದ ನಟಿ, “ನಾನು ಸುರಕ್ಷಿತವಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ತಪಾಸಣೆ ಮುಗಿದ ಕ್ಷಣ, ಬೇರೆ ಕ್ಯಾಬಿನ್ನಲ್ಲಿದ್ದ ಸಿಐಎಸ್ಎಫ್ನ ಮಹಿಳಾ ಪೇದೆ ನನಗಾಗಿ ಕಾಯುತ್ತಿದ್ದಳು. ಅವಳು ನನ್ನ ಮುಖಕ್ಕೆ ಒಂದು ಬದಿಯಿಂದ ಹೊಡೆದು ನಿಂದಿಸಿದಳು. ಅವಳು ಇದನ್ನು ಏಕೆ ಮಾಡಿದಳು ಎಂದು ನಾನು ಆಕೆಯನ್ನು ಕೇಳಿದೆ, ಮತ್ತು ಅವಳು ಹೇಳಿದಳು, ಇದು ರೈತರ ಪ್ರತಿಭಟನೆಗಾಗಿ ಎಂದು ಹೇಳಿದಳು ಎಂದು ಕಂಗನಾ ಅವರು ವಿಡಿಯೊ ಮೆಸೇಜ್ನಲ್ಲಿ ತಿಳಿಸಿದ್ದಾರೆ ಎಂದರು.

