ಗ್ವಾಲಿಯರ್: ವ್ಯಕ್ತಿಯೊಬ್ಬ ಬಿಸ್ಲೇರಿ ನೀರನ್ನು ಕುಡಿದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ.
ಆಪಗಂಜ್ ನಿವಾಸಿಯಾಗಿರುವ ನದೀಮ್ ಖಾನ್ ಅವರು ಬಾಯಾರಿಕೆ ಅಂತ ಶೀಟ್ಲಾ ಡೈರಿಯಿಂದ ಬಾಟಲಿ ನೀರನ್ನು ಖರೀದಿಸಿದರು. ಅವರು ಆ ಬಿಸ್ಲೇರಿ ಬಾಟಲಿಯಿಂದ ನೀರನ್ನು ಕುಡಿದ ತಕ್ಷಣವೇ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದು, ಕೂಡಲೇ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಗ್ವಾಲಿಯರ್ನ ಜಯರೋಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನದೀಮ್ ಖಾನ್ ಅವರ ಸ್ಥಿತಿ ಗಂಭೀರವಾಗಿದೆ. ನದೀಮ್ ಖಾನ್ ಸಹೋದರ ತಾಹಿರ್ ಖಾನ್ ಅವರು ಬಾಟಲಿಯನ್ನು ಸಾಕ್ಷ್ಯವಾಗಿ ಇಟ್ಟುಕೊಂಡು ಬಹೋದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಟಲ್ ಒಂದು ಪ್ರಸಿದ್ಧ ಬ್ರಾಂಡ್ ಎಂದು ತೋರುತ್ತಿದೆ. ಆದರೆ ಅದರ ಮೇಲೆ ಬಿಸ್ಲೇರಿಗಾಗಿ ಬಿಸಿಲೇರಿಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಬಳಿಕ ನೀರನ್ನು ಕುಡಿಯುತ್ತಿದ್ದಾಗ ಅಹಿತಕರ ವಾಸನೆಯನ್ನು ಬಂದಿದೆ. ಹೀಗಾಗಿ ನೀರು ಸೇವಿಸಿದ ನದೀಮ್ ಅಸ್ವಸ್ಥಗೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

