NCP ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್​ಗಳನ್ನು ಕ್ರೈ ಬ್ರಾಂಚ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣ ನಿವಾಸಿ ಗುರ್ಮೈಲ್​​ ಬಲ್ಜೀತ್​​ ಸಿಂಗ್​ (23) ಮತ್ತು ಉತ್ತರ ಪ್ರದೇಶದ ಬಹ್ರೈಚ್​ ನಿವಾಸಿ ಧರ್ಮರಾಜ್​ ರಾಜೇಶ್​ ಕಶ್ಯಪ್​ ಎಂದು ಗುರುತಿಸಲಾಗಿದೆ.

ಮತ್ತೋರ್ವ ಶೂಟರ್​​ ಶಿವಕುಮಾರ್​ ಗೌತಮ್​ ಅಲಿಯಾಸ್​ ಶಿವ (20) ಕೂಡ ಉತ್ತರ ಪ್ರದೇಶದ ಬಹ್ರೈಚ್​ ನಿವಾಸಿಯಾಗಿದ್ದು, ಆತನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ ಆರೋಪಿಗಳ ಜಾತಕವನ್ನು ಪೊಲೀಸರು ತೆರೆದಿಟ್ಟಿದ್ದಾರೆ. ಅದರಲ್ಲಿ ಧರ್ಮರಾಜ್​ ಮತ್ತು ಶಿವಕುಮಾರ್ ಬಹ್ರೈಚ್​ನ​ ಕೈಸರ್​ಗಂಜ್​ ಪೊಲೀಸ್​​ ಠಾಣೆ ವ್ಯಾಪ್ತಿಯ ಗಂದಾರಾ ಪಟ್ಟಣ ನಿವಾಸಿಗಳಾಗಿದ್ದು, ಇವರ ಮೇಲೆ ಯಾವುದೇ ಕ್ರಿಮಿನಲ್​ ಪ್ರಕರಣವಿರಲಿಲ್ಲ. ಆದರೆ ಬಲ್ಜೀತ್​ ಸಿಂಗ್​ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಹೇಳಿದ್ದಾರೆ.