ದುಬೈ : ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಯು ಎ ಇ ಸಮಿತಿ ಅಧೀನದಲ್ಲಿ ಅಹ್ಲಾನ್ ರಮಳಾನ್ ಕಾರ್ಯಕ್ರಮವು ಮಾರ್ಚ್ 27 ರಂದು ದುಬೈ ಯಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಇದರ ಅಧ್ಯಕ್ಷರು ಪ್ರಧಾನ ಶಿಲ್ಪಿಯೂ ಆದ ಸಯ್ಯದ್ ಜಿಫ್ರಿ ಝೈನುಲ್ ಆಬಿದೀನ್ ತಂಙಲ್ ರವರು ಆಗಮಿಸಲಿದ್ದು ಹಲವಾರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಯು ಎ ಇ ಸಮಿತಿ ಅಧ್ಯಕ್ಷರಾದ ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ ಹಾಗೂ ಪ್ರಧಾನ ಕಾರ್ಯದರ್ಶಿ ನಾಸೀರ್ ಬಪ್ಪಳಿಗೆ ರವರು ಘೋಷಿಸಿದರು.
ಪ್ರಸಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಲ್ಯಾಂಡ್ ಮಾರ್ಕ್ ಹೋಟೆಲ್ ಬನಿಯಾಸ್ ನಲ್ಲಿ ನಡೆಯಿತು, ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ ರವರು ಉದ್ಯಮಿ ಅಶ್ರಫ್ ಷಾ ಮಾಂತೂರ್ ರವರಿಗೆ ಹಸ್ತಾಂತರಿಸುವ ಮೂಲಕ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಸರ್ವರ ಸಹಕಾರವನ್ನು ಯಾಚಿಸಿದರು. ಈ ಸಂಧರ್ಭದಲ್ಲಿ ಸುಲೈಮಾನ್ ಮೌಲವಿ ಕಲ್ಲೇಗ , ಶರೀಫ್ ಕೊಡಿನೀರ್ , ಅಶ್ರಫ್ ಅರ್ತಿಕೆರೆ , ಅಬ್ದುಲ್ ಸಲಾಂ ಬಪ್ಪಳಿಗೆ,ಹನೀಫ್ ಹರಿಯಮೂಲೆ , ಹಮೀದ್ ಮುಸ್ಲಿಯಾರ್ ಬದ್ರುದ್ದೀನ್ ಹೆಂತಾರ್, ಅಶ್ರಫ್ ಪರ್ಲಡ್ಕ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಪ್ರಸಕ್ತ ಅಹ್ಲಾನ್ ರಮಳಾನ್ ಕಾರ್ಯಕ್ರಮದ ಕಾರ್ಯಕ್ರಮವು ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಮಾರ್ಚ್ 27 ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸಯ್ಯದ್ ಜಿಫ್ರಿ ಝೈನುಲ್ ಆಬಿದೀನ್ ತಂಙಲ್ ರವರನ್ನು ಒಳಗೊಂಡು ಹಲವಾರು ಗಣ್ಯರು ಭಾಗವಹಿಸಲಿದ್ದು ಫಾರೂಕ್ ದಾರಿಮಿ ಕೊಳ್ಳಂಪಾಡಿ ರವರು ಮುಖ್ಯ ಪ್ರಭಾಷಣ ಗೈಯಲ್ಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಆತೂರ್ , ಪ್ರಧಾನ ಕಾರ್ಯದರ್ಶಿ ಇಸಾಕ್ ಕುಡ್ತಮುಗೇರ್ , ಕೋಶಾಧಿಕಾರಿ ಜಾಬೀರ್ ಬಪ್ಪಲಿಗೆ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ