ಮುಂಬಯಿ: ಸಾಫಲ್ಯ ಸೇವಾ ಸಂಘದ ವತಿಯಿಂದ ಕ್ರೀಡಾ ಸ್ಪರ್ಧೆ – 2022

ಮುಂಬಯಿ: ಜೀವನದ ಪಥಸಂಚಲನದಲ್ಲಿ ಆಟೋಟ ಸ್ಪರ್ಧೆಯು ಕೇವಲ ಸ್ಫೂರ್ತಿದಾಯಕ ಮಾತ್ರವಲ್ಲ ಅದು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಅದರಿಂದ ಗಳಿಸಿದ ಮಾನ್ಯತೆ, ಪಡೆದ ಪುರಸ್ಕಾರ ಜೀವನಪರ್ಯಂತ ನೆನಪಿಡಲು ಸಾಧ್ಯ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅಭಿಪ್ರಾಯ ಪಟ್ಟಿದ್ದಾರೆ.

ನ. 12 ರಂದು ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಪೊಯಿನ್ಸರ್ ಜಿಮ್ಕಾನ, ದಲ್ಲಿ ನಡೆದ ಸಾಫಲ್ಯ ಸೇವಾ ಸಂಘ, ಮುಂಬಯಿ – ಕ್ರೀಡಾ ಸ್ಪರ್ಧೆ – 2022 ಕ್ಕೆ ಚಾಲನೆ ನೀಡಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮಕ್ಕಳು ಕ್ರೀಡಾ ಸ್ಪರ್ಧೆ ಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಚಿನ್ನ ದ ಪದಕ ತಂದಲ್ಲಿ ಕೇವಲ ತಂದೆ, ತಾಯಂದಿರಿಗೆ ಮಾತ್ರವಲ್ಲ ಅದು ಅವರ ಸಮಾಜಕ್ಕೂ ಸಂತೋಷವನ್ನುಂಟುಮಾಡುತ್ತದೆ. ಇಲ್ಲಿ ಗೆಲುವು ಮುಖ್ಯವಲ್ಲ, ಬಾಗವಹಿಸುವುದು ಅತೀ ಮುಖ್ಯ. ನಮ್ಮ ಸಾಧಕರು ನಮ್ಮೊಂದಿಗೆ ಇದ್ದು ಪ್ರೋತ್ಸಾಹಿಸುದರಿಂದ ನಮಗೆ ಹೆಚ್ಚಿನ ಸ್ಪೂರ್ತಿ ದೊರಕುತ್ತದೆ. ಜನವರಿಯಲ್ಲಿ ಬಂಟದ ಸಂಘದಲ್ಲಿ ನಡೆಯಲಿರುವ ಸಾಫಲ್ಯ ಸೇವಾ ಸಂಘ ದ ಉತ್ಸವಕ್ಕೆ ಎಲ್ಲರೂ ಆಗಮಿಸಿ ಸಹಕರಿಸಬೇಕು ಎಂದರು.

ಸಾಫಲ್ಯ ಸಮಾಜದ ಯುವಪ್ರತಿಭೆ ಅಂತಾರಾಷ್ಟ್ರೀಯ ಅಥ್ಲೆಟಿಕ್, ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಮಾಸ್ಟರ್ ಇಶಾನ್ ಪುತ್ರನ್ ಇವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ತನ್ನ ಯಶಸ್ಸಿಗೆ ಆಶೀರ್ವದಿಸಿದ ಸಹಕರಿಸಿದ ಎಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸುತ್ತಾ ಸದ್ಯದಲ್ಲೇ ಥೈಲೇಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಲಿದ್ದು ನಿಮ್ಮೆಲ್ಲರ ಆಶೀರ್ವಾದ ನನಗಿರಲಿ ಎಂದರು.

 

ಗೌರವ ಅತಿಥಿಗಳಾಗಿ ರೇನ್ಬೋ ಬುಡೋಕನ್ ಕರಾಟೆ ಅಕಾಡೆಮಿಯ ಸ್ಥಾಪಕ ವಸಂತ್ ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ತುಳು ಬಾಷೆ ಮಾತನಾಡಲು ನನಗೆ ತುಂಬಾ ಇಷ್ಟ. ತಂದೆ ತಾಯಂದಿರ ಮಾತೃ ಬಾಷೆಯನ್ನು ನಾವು ಮಾತನಾಡಲು ಕಲಿಯಬೇಕು. ಕ್ರೀಡೆಯಲ್ಲಿ ಮೊದಲು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರದಲ್ಲಿ ಅನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಬಹುದು. ಪ್ರತಿಯೊಬ್ಬ ಕ್ರೀಡಾ ಪಟುವಿಗೆ ಗೆಲುವಿಗಿಂತ ಕ್ರೀಡೆಯಲ್ಲಿ ಬಾಗವಹಿಸುವುದು ಅತೀ ಮುಖ್ಯ. ಓದುವುದರೊಂದಿಗೆ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.

ಉದ್ಯಮಿ ಹಾಗೂ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ನಾಗೇಶ್ ಎನ್ ಸಪಲ್ಯ ಮಾತನಾಡುತ್ತಾ ನಮ್ಮ ಕುಂಟುಂಬದ ಕಾರ್ಯಕ್ರಮದಂತಿದ್ದು ಎಲ್ಲರನ್ನೂ ಇಲ್ಲಿ ಕಾಣಲು ಸಂತೋಷವಾಗುತ್ತಿದೆ. ಈ ಸಂಘಕ್ಕೆ ನನ್ನಿಂದಾಗುವ ಸಹಾಯವನ್ನು ನೀಡುವೆನು ಎಂದರು.

ವೇದಿಕೆಯಲ್ಲಿ ಅತಿಥಿ ಸಾಹಿಲ್ ಕುಮಾರ್ ಕಾರ್ಕಳ, ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶೋಭಾ ಬಂಗೇರ, ಕೋಶಾಧಿಕಾರಿ ಹೇಮಂತ್ ಸಪಲಿಗ, ಕ್ರೀಡಾ ಸಮಿತಿಯ ಅಧ್ಯಕ್ಷ ಜೀವನ್ ಸಿರಿಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸಂದ್ಯಾ ಪುತ್ರನ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಜೀವನ್ ಶ್ರೀಯಾನ್ ಉಪಸ್ಥಿತರಿದ್ದರು. ಯುವ ವಿಭಾಗದ ಕಾರ್ಯಾದರ್ಶಿ ಶ್ವೇತಾ ಬಂಗೇರ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅತಿಥಿಗಳನ್ನು ಐಶ್ವರ್ಯ, ಸಂದ್ಯಾ ಪುತ್ರನ್, ದಿಶಾ ಬಂಗೇರ ಪರಿಚಯಿಸಿದರು. ಸ್ಪರ್ದೆಗೆ ತೀರ್ಪುಗಾರರಾಗಿ ಸೌರಬ್ ಕಟಾವತೆ, ಅನಿಕೇತ್ ದಲ್ವಿ, ರೋಹನ್ ಪದ್ವಾಲ್, ಅದಿತ್ಯ ಮತ್ತು ಮಹೇಶ್ ಸಹರಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಸ್ಪರ್ದೆಗೆ ದಾನಿಗಳಾಗಿ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು.

ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿರುವ ಈ ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ, ಪುರುಷರಿಗೆ ವಿಶೇಷವಾಗಿ ಮಕ್ಕಳಿಗೆ ಕ್ರಿಕೆಟ್ ಟೂರ್ನಮೆಂಟ ನಡೆಯಿತು.

ಕ್ರೀಡಾಕೂಟದಲ್ಲಿ ಹಿರಿ ಕಿರಿಯರು ಭಾಗವಹಿಸಿದ್ದು ಥ್ರೋಬಾಲ್, ಮಹಿಳೆಯರ ಹಾಗೂ ಪುರುಷರ ಕ್ರಿಕೆಟ್ ಪಂದ್ಯ ನಡೆಯಿತು.ಲಕ್ಕಿಡಿಪ್ ಡ್ರಾ ಕೂಡ ನಡೆಯಿತು.

ಉಚಿತ ವೈದ್ಯಕೀಯ ಶಿಬಿರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಚಿನ್ ಸಲ್ಯಾನ್ ಈ ಬಗ್ಗೆ ಮಾಹಿತಿಯಿತ್ತರು.ಕ್ರೀಡಾ ಸ್ಪರ್ಧೆ ಯ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ಸಹಕರಿಸಿದರು

Ashika S

Recent Posts

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

8 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

20 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

32 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

35 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

50 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

1 hour ago