ಬಹ್ರೈನ್: ಕಿಂಗ್ಡಮ್ ಸಭಾಂಗಣ, ನ್ಯೂ ಮಿಲೇನಿಯಮ್ ಸ್ಕೂಲ್, ಜಿಂಜ್, ಬಹ್ರೈನ್ ನಲ್ಲಿ ಸೆಪ್ಟೆಂಬರ್ 23, ಶುಕ್ರವಾರದಂದು ಸಾಯಾಂಕಾಲ 4:30 ಕ್ಕೆ ಕನ್ನಡ ಭವನ ಉದ್ಘಾಟನ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ. ಎಸ್. ಯಡಿಯೂರಪ್ಪ, ಪೀಯೂಷ್ ಶ್ರೀವಾಸ್ತವ, ಬಿ. ವೈ. ವಿಜಯೇಂದ್ರ, ಜಯಪ್ರಕಾಶ್ ಹೆಗ್ಡೆ, ಮಹೇಶ್ ಜೋಷಿ, ಡಾ. ಆರತಿ ಕೃಷ್ಣ, ಡಾ. ಮನು ಬಳಿಗಾರ್, ವಿಶ್ವೇಶ್ವರ್ ಭಟ್, ರವಿ ಹೆಗಡೆ, ಯುಸುಫ್ ಲೋರಿ, ಕೆ. ಪ್ರಕಾಶ್ ಶೆಟ್ಟಿ ಭಾಗವಹಿಸಲಿದ್ದಾರೆ.