ಕಾಸರಗೋಡು: ಸೌದಿಯಲ್ಲಿ ಉಂಟಾದ ರಸ್ತೆ ಅಪಘಾತದಲ್ಲಿ ಕುಂಬಳೆ ನಿವಾಸಿ ಯೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ಬಂಬ್ರಾಣದ ಸಲಾಂ ( ೩೦) ಎಂದು ಗುರುತಿಸಲಾಗಿದೆ. ಜಿದ್ದಾ ಕೆ ಎಂ ಸಿ ಸಿ ಸಂಘಟನೆ ಯ ಮಂಜೇಶ್ವರ ಮಂಡಲ ಕಾರ್ಯದರ್ಶಿಯಾಗಿದ್ದರು.
ಸೋಮವಾರ ಸಂಜೆ ಸಲಾಂ ಸಂಚರಿಸುತಿದ್ದ ಕಾರಿಗೆ ಟ್ರಕ್ಕೊಂದು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿರುವುದಾಗಿ ಮಾಹಿತಿ ಲಭಿಸಿದೆ. ಏಳು ತಿಂಗಳ ಹಿಂದೆಯಷ್ಟೇ ಇವರ ವಿವಾಹ ನಡೆದಿತ್ತು.