ಮುಂಬಯಿ: ಶಿವಾಯ ಫೌಂಡೇಶನ್ ಇದರ ಉದ್ಘಾಟನಾ ಸಮಾರಂಭವು ಜ.12ರಂದು ಘಾಡ್ಗೆ ಮಹಾರಾಜ ಧರ್ಮಶಾಲೆ ದಾದರ್ ನಲ್ಲಿ ನೆರವೇರಿತು.
ಸಮಾಜಮುಖಿ ಚಿಂತನೆಗಳನ್ನು ಒಳಗೊಂಡ ಶಿವಾಯ ಫೌಂಡೇಶನ್ ನ ಅಧಕ್ಷರಾಗಿ ತಾರಾನಾಥ್ ರೈ ನೇಮಕಗೊಂಡಿದ್ದಾರೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂಸ್ಥೆಯ ಸಮಾಜಸೇವೆಯಲ್ಲಿ ತೊಡಗಲಿದ್ದು, ಅಶಕ್ತರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ನೀಡುವುದಾಗಿ ಅವರು ತಿಳಿಸಿದರು. ದಾನಿಗಳ ನೆರವಿನಿಂದ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಶಿವಾಯ ಫೌಂಡೇಶನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.