ದುಬೈ : ಮಂಗಳೂರಿನ ಮರಕಡ ಪೂಜ್ಯ ನರೇಂದ್ರನಾಥ್ ಯೋಗೇಶ್ವರೇಶ್ವರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ವತಿಯಿಂದ ನೆಡಯಲಾಯಿತು.
ಶಾರ್ಜಾದಲ್ಲಿ ಶ್ರೀ ಅಜಿತ್ ಬೇಕಲ್ ಅವರ ವಸದಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಹಳಷ್ಟು ಸ್ವಜಾತಿ ಬಾಂದವರು ಬಾಗವಹಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸುಗಂಧರಾಜ ಬೇಕಲ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡು ಅಜಿತ್ ಕೊರಕೋಡ್ ನಾಗೇಶ್ ಕುಂದಾಪುರ, ದಿನೇಶ್ ಬೇಕಲ್ ,ಪ್ರವೀಣ್ ಉಪ್ಪೂರ್ , ಮಹೇಶ್ ಕೋಟಿಲಾಂಗಾಡು ಸೇರಿ ಬಹಳಷ್ಟು ಮಂದಿ ಪಾಲ್ಗೊಂಡು ನಿರಂತರ ಭಜನಾ ಕಾರ್ಯಕ್ರಮ ನೆಡಿಯಿತು.
ಸುಗಂಧರಾಜ ಬೇಕಲ್ ಸ್ವಾಮಿಗಳ ಬಗ್ಗೆ ವಿವರಣೆ ನೀಡಿದರು , ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸ್ಥಾಪಕ ಪದಾಧಿಕಾರಿ ಹಾಗು ಮಾಜಿ ಅಧ್ಯಕ್ಷರು ಆದ ಪ್ರಭಾಕರ್ ಅಂಬಲತೆರೆ ಸ್ವಾಮಿಜಿಗಳ ಬಗ್ಗೆ ಬಹಳ ವಿಸ್ತಾರ ವಾದ ಹಿತನುಡಿಗಳು ಹೇಳಿದರು , ಶ್ರೀನಿವಾಸ್ ಕೊಲ್ಯ ಸ್ವಾಮಿಗಳ ಸಂದೇಶದ ಬಗ್ಗೆ ಸ್ಪಷ್ಟನೆ ನೀಡಿದರು.
ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಪೂನೆ, ಮಂಜುನಾಥ ಕಾಸರಗೋಡು , ಸಂದೀಪ್ ಮುಂಬೈ , ಮಹೇಶ್ ಚಂದ್ರಗಿರಿ ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲಾ ಸದಸ್ಯರು ಸ್ವಾಮಿಗಳ ಬಾವಚಿತ್ರಕೆ ಪುಷ್ಪದಳ ಅರ್ಪಿಸಿ ತಮ್ಮ ಗೌರವನಮನ ಸಲ್ಲಿಸಿದರು.
ಸುಧೀರು ಅವರ ಧನ್ಯವಾದ ಸಮರ್ಪಣೆ ಮಾಡಿದರು ಹಾಗು ಅಜಿತ್ ಬೇಕಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆ ಆಯೋಜಿಸಲಾಗಿತು.
ವರದಿ: ಪ್ರಭಾಕರ ಅಂಬಲತೆರೆ
ಆಮ್ ಆದ್ಮಿ ಪಕ್ಷಕ್ಕೆ ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್ಸಿಆರ್ಎ ತನಿಖೆಯನ್ನು ಕೋರಿ…
ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…
ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ…
ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…
ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…