News Karnataka Kannada
Sunday, May 12 2024
ಹೊರನಾಡ ಕನ್ನಡಿಗರು

ಮರಕಡ ಪೂಜ್ಯ ನರೇಂದ್ರನಾಥ್ ಯೋಗೇಶ್ವರೇಶ್ವರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮ

Mangalore
Photo Credit :

ದುಬೈ : ಮಂಗಳೂರಿನ ಮರಕಡ ಪೂಜ್ಯ ನರೇಂದ್ರನಾಥ್ ಯೋಗೇಶ್ವರೇಶ್ವರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ವತಿಯಿಂದ ನೆಡಯಲಾಯಿತು.

ಶಾರ್ಜಾದಲ್ಲಿ ಶ್ರೀ ಅಜಿತ್ ಬೇಕಲ್ ಅವರ ವಸದಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಹಳಷ್ಟು ಸ್ವಜಾತಿ ಬಾಂದವರು ಬಾಗವಹಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸುಗಂಧರಾಜ ಬೇಕಲ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡು ಅಜಿತ್ ಕೊರಕೋಡ್ ನಾಗೇಶ್ ಕುಂದಾಪುರ, ದಿನೇಶ್ ಬೇಕಲ್ ,ಪ್ರವೀಣ್ ಉಪ್ಪೂರ್ , ಮಹೇಶ್ ಕೋಟಿಲಾಂಗಾಡು ಸೇರಿ ಬಹಳಷ್ಟು ಮಂದಿ ಪಾಲ್ಗೊಂಡು ನಿರಂತರ ಭಜನಾ ಕಾರ್ಯಕ್ರಮ ನೆಡಿಯಿತು.

ಸುಗಂಧರಾಜ ಬೇಕಲ್ ಸ್ವಾಮಿಗಳ ಬಗ್ಗೆ ವಿವರಣೆ ನೀಡಿದರು , ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸ್ಥಾಪಕ ಪದಾಧಿಕಾರಿ ಹಾಗು ಮಾಜಿ ಅಧ್ಯಕ್ಷರು ಆದ ಪ್ರಭಾಕರ್ ಅಂಬಲತೆರೆ ಸ್ವಾಮಿಜಿಗಳ ಬಗ್ಗೆ ಬಹಳ ವಿಸ್ತಾರ ವಾದ ಹಿತನುಡಿಗಳು ಹೇಳಿದರು , ಶ್ರೀನಿವಾಸ್ ಕೊಲ್ಯ ಸ್ವಾಮಿಗಳ ಸಂದೇಶದ ಬಗ್ಗೆ ಸ್ಪಷ್ಟನೆ ನೀಡಿದರು.

ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಪೂನೆ, ಮಂಜುನಾಥ ಕಾಸರಗೋಡು , ಸಂದೀಪ್ ಮುಂಬೈ , ಮಹೇಶ್ ಚಂದ್ರಗಿರಿ ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲಾ ಸದಸ್ಯರು ಸ್ವಾಮಿಗಳ ಬಾವಚಿತ್ರಕೆ ಪುಷ್ಪದಳ ಅರ್ಪಿಸಿ ತಮ್ಮ ಗೌರವನಮನ ಸಲ್ಲಿಸಿದರು.

ಸುಧೀರು ಅವರ ಧನ್ಯವಾದ ಸಮರ್ಪಣೆ ಮಾಡಿದರು ಹಾಗು ಅಜಿತ್ ಬೇಕಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆ ಆಯೋಜಿಸಲಾಗಿತು.

ವರದಿ: ಪ್ರಭಾಕರ ಅಂಬಲತೆರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು