ನವದೆಹಲಿ: ಕರ್ನಾಟಕದ ರಾಣಿ ಅಬ್ಬಕ್ಕ ಉತ್ಸವವನ್ನು ದೆಹಲಿ ಕರ್ನಾಟಕ ಸಂಘವು ದೇಶದ ರಾಜಧಾನಿಯಲ್ಲಿ ಒಂದು ವಾರಗಳ ಕಾಲ ನಿರಂತರವಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ.
ಈ ವೇಳೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರು ದೆಹಲಿ ಕರ್ನಾಟಕ ಸಂಘಕ್ಕೆ ಭೇಟಿ ನೀಡಿ ಆಯೋಜಕರು, ಕಲಾವಿದರನ್ನು ಅಭಿನಂದಿಸಿ, ಶುಭ ಹಾರೈಸಿದರು.
ರಾಣಿ ಅಬ್ಬಕ್ಕ ಜೀವನ ಜೀವನ ಮಾರ್ಗದರ್ಶನವಾಗಲಿ. ವಿದೇಶಿಗರು ಬಂದು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದರು. ಇದರಿಂದ ನಮ್ಮ ದೇಶದ ಸಂಪತ್ತು ನಾಶವಾಯಿತು. ವಿಜಯನಗರ ಸಾಮ್ರಾಜ್ಯದ ಒಂದು ಪುಟವನ್ನು ಓದಿದರೆ ನಮಗೆ ಅದರ ಬಗ್ಗೆ ತಿಳಿಯುತ್ತದೆ ಎಂದು ಫೆರ್ನಾಂಡೀಸ್ ಹೇಳಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಜಂಟಿ ಕಾರ್ಯದರ್ಶಿ ಟಿ.ಪಿ. ಬೆಳ್ಳಿಯಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.