ದುಬೈ: ತುಳು ಪಾತೆರ್ ಗ ತುಳು ಒರಿಪಾಗ ದುಬೈಯ 4ನೇ ವರ್ಷದ “ಗೌಜಿ ಗಮ್ಮತ್ ಗೊಬ್ಬುಲೆದ ಲೆಸ್” ದುಬೈಯ ಜ಼ಬೀಲ್ ಪಾರ್ಕ್ ನಲ್ಲಿ ಶುಕ್ರವಾರ ನೆರವೇರಿತು.
ದುಬೈಯ ಉದ್ಯಮಿಯಾದ ಪ್ರಭಾಕರ್ ಶೆಟ್ಟಿ ಮತ್ತು ಸಾಮಾಜಿಕ ಕಾರ್ಯಾಕರ್ತ ನೊವೆಲ್ ಆಲ್ಮೆಡ “ಚೆನ್ನೆದ ಮಣೆ” ಆಡುವ ಮೂಲಕ ಕಾರ್ಯಾಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತುಳುನಾಡಿನ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಹಗ್ಗಜಗ್ಗಾಟ, ಕಾಗದ ದ ಆಟ, ಗೋಣಿ ಚೀಲ, ಸೈಕಲ್ ಚಕ್ರ ಓಡಿಸುವ ಹಾಗೂ ಹಲವಾರು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಾಲಕೃಷ್ಣ ಸಾಲ್ಯಾನ್, ಸುಧಾಕರ್ ತುಂಬೆ, ಆನಂದ್ ಸಾಲ್ಯಾನ್, ಸತೀಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಾಕ್ರಮಕ್ಕೆ ಶುಭ ಹಾರೈಸಿದರು. ದುಬೈಯಲ್ಲಿ ನಡೆಯುವ ರಕ್ತದಾನ ಶಿಬಿರದ ರೂವಾರಿಯಾದ ಬಾಲಕೃಷ್ಣ ಸಾಲ್ಯಾನ್ ಇವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಲ್ಲಾ ಸದ್ಯಸರು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರು. ಜಯಗಳಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ತುಳು ಪಾತೆರ್ ಗ ತುಳು ಒರಿಪಾಗದ ಪ್ರಧಾನ ಕಾರ್ಯಾದರ್ಶಿಯಾದ ರೀತು ಅಂಚನ್ ಕುಲಶೇಖರ್ ಇವರು ಸ್ವಾಗತಿಸಿ ಕಾರ್ಯಾಕ್ರಮವನ್ನು ನಿರೂಪಿಸಿದರು.
ನೊವೆಲ್ ಆಲ್ಮೆಡ ಹಾಗೂ ಅಮರ್ ಉಮೇಶ್ ಇವರು ಕ್ರೀಡೆಗಳನ್ನು ನಿರ್ವಹಿಸಿ ಸಂಘದ ಅದ್ಯಕ್ಷರಾದ ಪ್ರೇಮ್ ಜೀತ್ ರವರು ತುಳು ಪಾತೆರ್ ಗ ತುಳು ಒರಿಪಾಗದ ಉದ್ದೇಶಗಳನ್ನು ವಿವರಿಸಿ ಪ್ರಾಯೋಜಕರಾದ ಉದಯ್ ಅಮೆರಿ, ಮನೋಜ್ ಕುಲಾಲ್, ಸತೀಶ್ ಪೂಜಾರಿ,ಭಾಸ್ಕರ ಅಂಚನ್, ಗುರುದತ್ ಇವರಿಗೆ ಧನ್ಯವಾದ ಸಮರ್ಪಣೆಯನ್ನು ಮಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಬಡಮಕ್ಕಳ ವಿಧಾರ್ಥಿವೇತನಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಲಾಯಿತು.