ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಹಾಗೂ ಕರ್ನಾಟಕ ಕಲ್ಚರಲ್ ಸೆಂಟರ್ ಅಧೀನದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆಯು ಡಿಸೆಂಬರ್ 2ರಂದು ಬನಿಯಾಸ್ ರಸ್ತೆಯಲ್ಲಿರುವ ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಹಲವಾರು ಸಾಮಾಜಿಕ ಧಾರ್ಮಿಕ ನೇತಾರರು, ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು ಅರಬ್ ಸ್ವದೇಶಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.00 ಘಂಟೆಯಿಂದ ಅನಿವಾಸಿ ಕನ್ನಡಿಗರಿಗಾಗಿ ಹಿರಿಯ ಕಿರಿಯ ವಿಭಾಗಳಲ್ಲಿ ಇಸ್ಲಾಮಿಕ್ ಭಾಷಣ, ನಬಿ ಮದಹ್ ಗಾನ ಮೊದಲಾದ ಸ್ಪರ್ಧಾ ಕಾರ್ಯಕ್ರಮಗಳು ಆಯೋಜಿಸಿದ್ದು, ಅನಿವಾಸಿ ಕನ್ನಡಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಮೀಲಾದ್ ಸ್ವಾಗತ ಸಮಿತಿ ಪಧಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಗ್ರಿಬ್ ನಮಾಜ್ಹಿನ ಬಳಿಕ ಸಂಜೆ 6.00 ಗಂಟೆಯಿಂದ ಮೌಲೂದ್ ಪಾರಾಯಣ ನಡೆಯಲಿದ್ದು ತದನಂತರ ಅತ್ಯಾಕರ್ಷಣೀಯ ದಫ್ಫ್ ಪ್ರಧರ್ಶಣೆಯು ನಡೆಯಲಿದೆ. ನಂತರ ರಾತ್ರಿ 7. ೦೦ ರಿಂದ ಸಭಾ ಕಾರ್ಯಕ್ರಮವು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದ ನೇತಾರರು , ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು, ಅಕಾಡೆಮಿ ಪಧಾಧಿಕಾರಿಗಳು ಭಾಗವಹಿಸಲಿದ್ದು, ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೆಐಸಿ ಗೌರವಧ್ಯಾಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆಯವರು ಪ್ರಾರ್ಥನೆಗೆ ನೇತೃತ್ವವನ್ನು ವಹಿಸಲಿದ್ದು ಅನಿವಾಸಿ ಉದ್ಯಮಿ ಕೆ ಐ ಸಿ ಪೋಷಕರಲ್ಲಿ ಓರ್ವರೂ ಆದ ಅಬ್ದುಲ್ ಖಾದರ್ ಹಾಜಿ ಅಂಚಿನಡ್ಕ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉಸ್ತಾದ್ ಖಲೀಲ್ ರಹ್ಮಾನ್ ಖಾಶಿಫಿಯವರು ಪ್ರವಾದಿ ಸ್ನೇಹ ವಿಷಯದಲ್ಲಿ ದಿಕ್ಸೂಚಿ ಪ್ರಭಾಷಣೆ ಗೈಯಲಿದ್ದು ಉಸ್ತಾದ್ ಶೌಕತ್ತಲಿ ಹುದವಿಯವರು ಯುಎಇ ರಾಷ್ಟ್ರೀಯ ದಿನಾಚರಣೆ ವಿಷಯದಲ್ಲಿ ವಿಷಯ ಮಂಡನೆ ಗೈಯಲಿದ್ದಾರೆ, ಎಂದು ಕೆಐಸಿ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆಗೊಳಿಸಲಾಗಿದ್ದು, ಅನಿವಾಸಿ ದೀನೀ ಪ್ರೇಮಿಗಳು ಕೆಐಸಿ ಹಿತೈಷಿಗಳೂ ಆದ ತಾವೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಯಲ್ಲಿ ಈ ಕಾರ್ಯಕಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ಕೆಐಸಿ ಕೇಂದ್ರ ಸಮಿತಿಯು ವಿನಂತಿಸಿ ಕೊಂಡಿರುತ್ತಾರೆ.