News Karnataka Kannada
Friday, May 10 2024
ಹೊರನಾಡ ಕನ್ನಡಿಗರು

ಕರ್ನಾಟಕ ಸಂಘ ಅಂಧೇರಿ: ದಶಮಾನೋತ್ಸವಕ್ಕೆ ಚಾಲನೆ

Photo Credit :

ಕರ್ನಾಟಕ ಸಂಘ ಅಂಧೇರಿ: ದಶಮಾನೋತ್ಸವಕ್ಕೆ ಚಾಲನೆ

ಮುಂಬಯಿ: ಕಳೆದ ಹತ್ತು ವರ್ಷಗಳಿಂದ ಅಂಧೇರಿ ಪರಿಸರದಲ್ಲಿನ ತುಳು ಕನ್ನಡಿಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಿಧವೆಯರಿಗೆ ವಿಧವಾ ವೇತನ, ಅಂಗವಿಕಲರಿಕೆ ಸಹಾಯ ಮುಂತಾದ ರೀತಿಯಲ್ಲಿ ಸೇವೆಮಾಡುತ್ತಾ ಬಂದಿರುವ ಕರ್ನಾಟಕ ಸಂಘ ಅಂಧೇರಿ ತನ್ನ ದಶಮಾನೋತ್ಸವವನ್ನು ಭಾನುವಾರ ಕುರ್ಲಾ ಪೂರ್ವ ಬಂಟರ ಸಂಘದ ಸಭಾಗೃಹದಲ್ಲಿ ಆಚರಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ಪುರೋಹಿತರಾದ ಎಂ. ಜೆ. ಪ್ರವೀಣ್ ಭಟ್ ಸಾಯನ್ ಇವರು ದಶಮಾನೋತ್ಸವಕ್ಕೆ ಚಾಲನೆಯಿತ್ತು, ನಂತರ ಆಶೀರ್ವಚನ ನೀಡುತ್ತಾ ಕಳೆದ ಹತ್ತು ವರ್ಷಗಳಿಂದ ಬಡವರ ಕಣ್ಣೀರನ್ನು ಒರಸುತ್ತಾ ಬಂದಿರುವ ಈ ಸಂಘದ ಸಂಘಟಕರು ಪರಿಶುದ್ದ ಮನಸ್ಸಿನವರು. ಪರಿಶುದ್ದ ಮನಸ್ಸಿನಿಂದ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ ಎಂದರು.

ಅತಿಥಿಯಾಗಿ ಆಗಮಿಸಿದ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿಯವರು ಮಾತನಾಡುತ್ತಾ ಈ ಸಂಘವು ಕಳೆದ ಹತ್ತು ವರ್ಶಗಳಿಂದ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು,

ಮೋಡೆಲ್ ಬ್ಯಾಂಕಿನ ಕ್ಲೆಮೆಂಟ್ ಲೋಭೋ ಅವರು ಸಂಘದ ಅಧ್ಯಕ್ಷರಾದ ಹ್ಯಾರಿ ಸಿಕ್ವೇರಾ ಮತ್ತವರ ತಂಡದ ಕಾರ್ಯವನ್ನು ಮೆಚ್ಚಿದರು. ವೇದಿಕೆಯಲ್ಲಿ ಇತರ ಅತಿಥಿಗಳಾದ ನೀಲೇಶ್ ಶೆಟ್ಟಿಗಾರ್, ಬಂಟರ ಸಂಘದ ಸ್ಥಳೀಯ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಧವ ಶೆಟ್ಟಿ, ಸಂಧ್ಯಕಲಾ ಅಮೀನ್, ಸುಧಾಕರ ಪೂಜಾರಿ, ಸಂಘದ ಗೌರವ ಅಧ್ಯಕ್ಷ ಪಿ. ಧನಂಜಯ ಶೆಟ್ಟಿ, ಸ್ಥಾಪಕ ಕೃಷ್ಣ ಬಿ. ಶೆಟ್ಟಿಮ್ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ರಾವ್, ಕೋಶಾಧಿಕಾರಿ ಗಣೇಶ್ ಬಲ್ಯಾಯ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಮಕ್ಕಳಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೃತ್ಯ ಹಾಗೂ ತುಳು ನಾಟಕ ಪ್ರದರ್ಶನವಿತ್ತು. ಸಾಂಸ್ಕೃತಿಯ ಸಮಿತಿಯ ಅಧ್ಯಕ್ಷ ಭಾಸ್ಕರ್ ಸಸಿಹಿತ್ತ್ಲು ಮತ್ತು ರಾಜ್ ಕುಮಾರ್ ಕಾರ್ನಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.​

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು