ಮುಂಬಯಿ: ವರ್ಲಿಯ ಅಪ್ಪಾಜಿಬೀಡು ಫೌಂಡೇಶನ್ ರಜತ ಮಹೋತ್ಸವ ಸಮಾರಂಭ ನಿಮಿತ್ತ ಮುಹೂರ್ತ ಕಾರ್ಯಕ್ರಮವು ಎ. 18ರಂದು ನಡೆಯಿತು.
ಜರಿಮೆರಿ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್. ಎನ್. ಉಡುಪ ಇವರು ದೀಪ ಬೆಳಗಿಸಿ ಕಾರ್ಯಕ್ರಮದ ಯಾದಿಯನ್ನು ಅನಾವರಣಗೊಳಿಸಿ ಮಾತನಾಡುತ್ತಾ ರಮೇಶ್ ಗುರುಸ್ವಾಮಿಯವರು ಅಪಾರ ಭಕ್ತರನ್ನು ಶಬರಿಮಲೆಗೆ ಕೊಂಡೊಯ್ಯುವ ಸಾಧನೆಯನ್ನು ಮಾಡಿದ್ದು ಈ ಧಾರ್ಮಿಕ ಕ್ಷೇತ್ರದ ಬೆಳ್ಳಿ ಹಬ್ಬವು ಅದ್ದೂರಿಯಿಂದ ನೆರವೇರಲಿ ಎಂದು ಶುಭ ಹಾರೈಸಿದರು.
ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಅತಿಥಿಯಾಗಿ ಉಪಸ್ಥಿತರಿದ್ದರು. ದಿವಾಕರ ಗುರುಸ್ವಾಮಿ, ಅಪ್ಪಾಜಿಬೀಡು ಫೌಂಡೇಶನ್ ನ ಟ್ರಸ್ಟಿ ರಘುನಾಥ ಎನ್. ಶೆಟ್ಟಿ ಈ ಸಂಧರ್ಭದಲ್ಲಿ ಮಾತನಾಡಿದರು. ಅಧ್ಯಕ್ಷರಾದ ಕೇದಗೆ ಸುರೇಶ್ ಶೆಟ್ಟಿಯವರು ಮಾತನಾಡುತ್ತಾ ಬೆಳ್ಳಿಹಬ್ಬ ಸಮಾರಂಭಕ್ಕೆ ದಾನಿಗಳ ಪ್ರೋತ್ಸಾಹದ ಬಗ್ಗೆ ತಿಳಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ ಶೆಟ್ಟಿ, ರಮೇಶ್ ಗುರುಸ್ವಾಮಿ, ಆಡಳಿತ ಟ್ರಷ್ಟಿ ಶಾಂಭವಿ ರಮೇಶ್ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಫೌಂಡೇಶನ್ ರಜತ ಮಹೋತ್ಸವ ಸಮಾರಂಭದ ಕಾರ್ಯಾಧ್ಯಕ್ಷರಾದ, ಪತ್ರಕರ್ತ ದಿನೇಶ್ ಕುಲಾಲ್ ಮಾತನಾಡುತ್ತಾ ಡಿ. 30ರಂದು ರಜತ ಮಹೋತ್ಸವ ನಡೆಯಲಿದ್ದು, ಎಲ್ಲರ ಸಹಕಾರ ಕೋರಿದ್ದಾರೆ. ಹರೀಶ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದ್ದು ವಿನೋದಾ ಶೆಟ್ಟಿಯವರು ವಂದನಾರ್ಪಣೆ ಮಾಡಿದರು.
ವರದಿ: ಈಶ್ವರ ಎಂ. ಐಲ್