ಬೆಂಗಳೂರು: ಬಹುತೇಕ ಹೊಸಬರೇ ಇರುವ 10 ಕನ್ನಡ ಸಿನಿಮಾಗಳು ಶುಕ್ರವಾರ ಕರ್ನಾಟಕದಲ್ಲಿ ಬೆಳ್ಳಿತೆರೆಗೆ ಬರಲಿವೆ.
‘ಬೆಂಗಳೂರು 69’, ‘ಹೊಂದಿಸಿ ಬರೆಯಿರಿ’, ‘ರಂಗಿನ ರಾಟೆ’, ‘ರೂಪಾಯಿ’, ‘ಉತ್ತಮರು’, ‘ಒಂದನೊಂದು ಕಾಲದಲ್ಲಿ’, ‘ರಾಯಭಾರಿ’, ‘ಲಾಂಗ್ ಡ್ರೈವ್’, ‘ಡಿಸೆಂಬರ್ 24’ ಮತ್ತು ‘ಲೈಫು ಇಷ್ಟೇನೆ’ ಚಿತ್ರಗಳು ಬಿಡುಗಡೆಯಾಗಲಿವೆ.
ಪವನ್ ಕುಮಾರ್ ನಿರ್ದೇಶನದ ಖ್ಯಾತ ನಟ ದಿಗಂತ್ ಮತ್ತು ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಲೈಫು ಇಷ್ಟೇನೆ’ ಚಿತ್ರ ಮರು ಬಿಡುಗಡೆ ಕಾಣುತ್ತಿದೆ.
ಈ ಪೈಕಿ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು ಮತ್ತು ಇಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಮೆಚ್ಚುಗೆ ಗಳಿಸಿವೆ.
ಬಾಕ್ಸ್ ಆಫೀಸ್ನಲ್ಲಿ ಸಿನಿಮಾಗಳು ಯಾವ ರೀತಿ ಪ್ರದರ್ಶನ ನೀಡುತ್ತವೆ ಎಂಬುದನ್ನು ಕಾದು ನೋಡಬೇಕು.