ನಾಲ್ಕು ವರ್ಷಗಳ ಹಿಂದೆ ವಿನಯ್ ರಾಜ್ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಕಾರಣಾಂತರಗಳಿಂದ ಸಿನಿಮಾ ಕೆಲಸಗಳು ನಿಂತವು. 25 ದಿನಗಳ ಚಿತ್ರೀಕರಣದ ನಂತರ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಹೊಸ ನಿರ್ಮಾಪಕರು ಈ ಸಿನಿಮಾ ಕೈಗೆತ್ತಿಕೊಂಡಿದ್ದು ಮತ್ತೊಮ್ಮೆ ಮುಹೂರ್ತ ಆಚರಿಸಿ ಚಾಲನೆ ಕೊಡಲಾಗಿದೆ. 2018ರಲ್ಲಿ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಆ ನಂತರ ಕೊರೋನಾ ಹಾವಳಿಯಿಂದ ಶೂಟಿಂಗ್ ಸ್ಥಗಿತವಾಗಿತ್ತು. ಇದೆಲ್ಲರ ನಡುವೆ ಚಿತ್ರದ ನಿರ್ಮಾಪಕರಾದ ಎನ್. ಎಲ್. ಎನ್ ಮೂರ್ತಿ 2020ರ ಜುಲೈನಲ್ಲಿ ಕೊನೆಯುಸಿರೆಳೆಸಿದ್ದರು. ಹಾಗಾಗಿ ಸಿನಿಮಾ ನಿಂತೇ ಹೋಗಿತ್ತು. ಇನ್ನೇನು ಸಿನಿಮಾ ಕಥೆ ಮುಗಿದೇ ಹೋಯ್ತು ಅಂತ ಎಲ್ಲರೂ ಸುಮ್ಮನಾಗಿದ್ದರು.
ಆದರೆ ನಿರ್ಮಾಪಕರಾದ ಮನೋಹರ್ ನಾಯ್ಡು ಹಾಗೂ ಕೆ.ಪಿ. ಶ್ರೀಕಾಂತ್ ಸೇರಿ ಚಿತ್ರಕ್ಕೆ ಮರುಜೀವ ಕೊಡುತ್ತಿದ್ದಾರೆ. ಜೂನ್ 8ರ ಕಳೆದ ದಿನ ಈ ಚಿತ್ರಕ್ಕೆ ಮತ್ತೇ ಮುಹೂರ್ತ ನೆರವೇರಿದೆ. ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ, ಬರಹಗಾರರಾಗಿ ಗುರ್ತಿಸಿಕೊಂಡಿದ್ದ ದೇವನೂರು ಚಂದ್ರು ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.