’02’ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥನ್ ಹೊಸ ಲುಕ್

ಸ್ಯಾಂಡಲ್ ವುಡ್:   ಕೆಲ ದಿನಗಳ ಹಿಂದೆಯಷ್ಟೇ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದ ಆಶಿಕಾ ರಂಗನಾಥ್‌ ಇದೀಗ ಕನ್ನಡದಲ್ಲಿ ’02’ ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಪ್ರಶಾಂತ್‌ ಮತ್ತು ರಾಘವ್‌ ನಿರ್ದೇಶನ ಮಾಡುತ್ತಿದ್ದಾರೆ.
ಮದಗಜ’ ಸಿನಿಮಾ ಸುಂದರಿ ಆಶಿಕಾ ರಂಗನಾಥ್‌ ಕನ್ನಡದಲ್ಲಿ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.ಇದುವರೆಗೂ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸುತ್ತಲೇ ತಮ್ಮ ಛಾಪು ಮೂಡಿಸಿದ್ದ ನಟಿ ಆಶಿಕಾ ರಂಗನಾಥ್‌ ಈ ಬಾರಿ ಕೊಂಚ ವಿಭಿನ್ನ ಸಬ್ಜೆಕ್ಟ್ ಓಕೆ ಮಾಡಿದ್ದಾರೆ. ’02’ ಒಂದು ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾ. ಮೆಡಿಕಲ್‌ ರಿಸರ್ಚ್ ಬಗ್ಗೆ ಸಿನಿಮಾದ ಕಥೆ ನಡೆಯುತ್ತಿದೆ. ನನ್ನ ಕರಿಯರ್‌ ಆರಂಭ ಆದಾಗಿನಿಂದ ಇಲ್ಲಿಯವರೆಗೂ ನಾನು ಇಂತಹ ಕಥೆಯಲ್ಲಿ ನಟಿಸಿರಲಿಲ್ಲ. ಈ ಸಿನಿಮಾದಲ್ಲಿ ನಾನು ಡಾಕ್ಟರ್‌ ಆಗಿ ನಟಿಸುತ್ತಿದ್ದೇನೆ ಎನ್ನುತ್ತಾರೆ ಆಶಿಕಾ ರಂಗನಾಥ್‌
ಈ ಕಥೆ ಮತ್ತು ಪಾತ್ರದ ಬಗ್ಗೆ ವಿವರ ಹೇಳಲಾಗುವುದಿಲ್ಲ. ಆದರೆ ಒಳ್ಳೆ ಥ್ರಿಲ್ಲಿಂಗ್‌ ಅಂಶಗಳಿರುವ ಸಿನಿಮಾವಿದು. ಚಿತ್ರಕಥೆಯೇ ಸಿನಿಮಾದ ಹೈಲೈಟ್‌. ಕಮರ್ಷಿಯಲ್‌ ಸಿನಿಮಾಗಳಲ್ಲಿ ಪ್ರೀತಿ, ಪ್ರೇಮ, ಭಾವನಾತ್ಮಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಈ ರೀತಿಯ ಸ್ಕ್ರಿಪ್ಟ್‌ಗಳಲ್ಲಿ ಕೊಂಚ ವಿಭಿನ್ನವಾದ ನಟನೆಯ ಅವಶ್ಯಕತೆ ಇರುತ್ತದೆ. ನನ್ನ ಪಾತ್ರ ವಿಶಿಷ್ಟವಾಗಿದ್ದು, ಇದೊಂದು ರೀತಿಯಲ್ಲಿ ಒಳ್ಳೆಯ ಅವಕಾಶ ಎನ್ನಬಹುದು. ಪುನೀತ್‌ ರಾಜ್‌ಕುಮಾರ್‌ ಅವರ ನಿರ್ಮಾಣದಲ್ಲಿ ಸಿನಿಮಾವಾಗುತ್ತಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ಆಶಿಕಾ.

ಅಕ್ಟೋಬರ್‌ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಆಶಿಕಾ ಅವರದ್ದೇ ಮುಖ್ಯ ಪಾತ್ರ. ವಿಭಿನ್ನ ಶೈಲಿಯ ನಿರೂಪಣೆ ಸಿನಿಮಾದಲ್ಲಿ ಇರುತ್ತದೆ. ಆಶಿಕಾ ಜತೆ ಇನ್ನಿಬ್ಬರು ಪ್ರಮುಖ ಪಾತ್ರಧಾರಿಗಳು ಇದ್ದಾರೆ, ಅವರ ಆಯ್ಕೆಯಾಗಿಲ್ಲ ಎಂದು ನಿರ್ದೇಶಕ ಪ್ರಶಾಂತ್‌ ಹೇಳಿದ್ದಾರೆ.ಕಥೆ ಬಹಳ ಇಂಟ್ರೆಸ್ಟಿಂಗ್‌ ಆಗಿದೆ. ಈ ರೀತಿಯ ಸ್ಕ್ರಿಪ್ಟ್‌ನ ಭಾಗವಾಗುವುದು ಕಲಾವಿದರಿಗೆ ಉತ್ತಮ ಅವಕಾಶ. ನನ್ನ ಪಾತ್ರದ ಸುತ್ತ ಕಥೆ ನಡೆಯುತ್ತದೆ. ನಿರ್ದೇಶಕರಿಬ್ಬರೂ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ ನಟಿ ಆಶಿಕಾ ರಂಗನಾಥ್ಕನ್ನಡದ ನಂತರ ಮೊದಲ ಬಾರಿಗೆ ತಮಿಳು ಸಿನಿಮಾ ಮೂಲಕ ಆಶಿಕಾ ರಂಗನಾಥ್ ಅವರು ಪರಭಾಷಾ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿನಡೆಯುವ ಕ್ರೀಡೆ ಆಧರಿತ ಸಿನಿಮಾವಿದು. ಹಳ್ಳಿ ಹುಡುಗಿಯ ಪಾತ್ರ. ಬಹಳ ಸ್ಟ್ರಾಂಗ್‌ ಆಗಿರುವ ಪಾತ್ರ’ ಎಂದು ಆಶಿಕಾ ಈ ಹಿಂದೆಯೇ ಹೇಳಿದ್ದಾರೆ. ಸರ್ಕುಣಂ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವ ಈ ಚಿತ್ರದ ಹೀರೋ. ಅಥರ್ವ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ.

Swathi MG

Recent Posts

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

15 mins ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

41 mins ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

53 mins ago

ಜಾತಿಗಿಂತ‌ ದೇಶದ ಹಿತ‌ ಮುಖ್ಯ: ವಿಜಯ್ ಜೋಶಿ ಮನವಿ

ಕಳೆದ 25 ವರ್ಷಗಳಿಂದ ವಿಜಯಪುರ ಜಿಲ್ಲೆಯ ಪ್ರಬುದ್ಧ ಮತದಾರರು ಯಾವುದೇ ಜಾತಿ, ಮತ, ಪಂಥ ನೋಡದೇ ಜಾತಿಗಿಂತ ದೇಶದ ಹಿತವೇ…

2 hours ago

ಪ್ರತಿ ಬೂತ್ ನಲ್ಲಿ ಬಿಜೆಪಿ ಪರ ಅಲೆ, ಕಾರ್ಯಕರ್ತರಲ್ಲಿ ಅತ್ಯುತ್ಸಾಹ : ಪ್ರಕಾಶ ಅಕ್ಕಲಕೋಟ.

ವಿಜಯಪುರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ‌ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ‌ ಅಲೆ‌ ಇದೆ…

2 hours ago

ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪ: ಐವರ ಬಂಧನ

ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪದಲ್ಲಿ ಹಣದ ಸಮೇತ ನಾಲ್ವರು ಸಿಕ್ಕಿಬಿದ್ದ ಘಟನೆ…

2 hours ago