ಸಮರ್ಥ್ ಚೊಚ್ಚಲ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಬಿಡುಗಡೆಗೆ ಸಿದ್ಧ

ಸ್ಯಾಂಡಲ್ ವುಡ್: ಟೈಟಲ್, ಟೀಸರ್ ಮೂಲಕ ಕುತೂಹಲ‌ ಮೂಡಿಸಿರುವ ಹೊಸಬರ ಸಿನಿಮಾ ಕ್ಯಾನ್ಸೀಲಿಯಂ. ಸಿನಿಮಾ‌ ರಸಿಕರಿಗೆ ಸೈನ್ಸ್ ಫಿಕ್ಷನ್ ಕಥಾಹಂದರದ  ಮೂಲಕ ಮನರಂಜನೆ ನೀಡಲು ರೆಡಿಯಾಗಿರುವ ಈ ಚಿತ್ರಕ್ಕೆ ಹೊಸ ಪ್ರತಿಭೆ ಸಮರ್ಥ್ ನಿರ್ದೇಶನವಿದೆ.
ಕ್ಯಾನ್ಸೀಲಿಯಂ ಸಮರ್ಥ್ ನಿರ್ದೇಶನದ ಚೊಚ್ಚಲ ಸಿನಿಮಾ. ಕಥೆ ಬರೆದು, ಡೈರೆಕ್ಟರ್ ಕ್ಯಾಪ್ ತೊಟ್ಟು ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ‌ ಮಿಂಚಿದ್ದಾರೆ ಸಮರ್ಥ್.ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವ ಇರುವ ಇವರಿಗೆ ಬಣ್ಣದ ಲೋಕದ ನಂಟು ಇದೇ ಮೊದಲು. ಕ್ಯಾನ್ಸೀಲಿಯಂ ಕಥೆ ಅರಳಿದ್ದು ಸುಮಾರು ಒಂಭತ್ತು ವರ್ಷಗಳ ಹಿಂದೆ ಆ ಕಥೆಗೆ ಸೈನ್ಸ್ ಫಿಕ್ಷನ್‌ ರೂಪ ಕೊಟ್ಟು ಅದನ್ನು ಸಿನಿಮಾ ರೂಪಕ್ಕೆ ತಂದು ನಿರ್ದೇಶನಕ್ಕೆ ಇಳಿದಿದ್ದು ಮೂರು ವರ್ಷದ ಹಿಂದೆ ಎನ್ನುತ್ತಾರೆ ನಿರ್ದೇಶಕ ಸಮರ್ಥ್. ಚಿತ್ರದಲ್ಲಿ ಸಮರ್ಥ್ ಹಾಗೂ ಸಹೋದರ ಪ್ರೀತಂ ಇಬ್ಬರು ನಾಯಕ‌ನಟರಾಗಿ ಅಭಿನಯಿಸಿದ್ದಾರೆ. ಇದೀಗ ಮೂರು ವರ್ಷದ ಪರಿಶ್ರಮ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದು ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ. ಇನ್ನೇನಿದ್ರು ಸಿನಿಮಾ ಬೆಳ್ಳಿತೆರೆ ಮೇಲೆ ಮೋಡಿ ಮಾಡೋದೊಂದೇ ಬಾಕಿ.

ಕ್ಯಾನ್ಸೀಲಿಯಂ ಟೈಟಲ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕ್ಯಾನ್ಸೀಲಿಯಂ ಎಂದರೆ ಉದ್ದೇಶ, ಪ್ಲ್ಯಾನ್ ಹೀಗೆ ನಾನಾ ಅರ್ಥಗಳನ್ನು ಒಳಗೊಂಡಿದೆ. ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ಕಥೆಗೆ ಈ ಹೆಸರು ಪೂರಕವಾಗಿದೆ ಎನ್ನುತ್ತದೆ ಚಿತ್ರತಂಡ. ಪ್ರಪಂಚದಲ್ಲಿ ಯಾವುದೇ ಘಟನೆಗಳು ನಡೆದರೂ ಅದಕ್ಕೊಂದು ವೈಜ್ಞಾನಿಕ ಕಾರಣವಿರುತ್ತೆ. ಅದರಂತೆ‌ ಸಿನಿಮಾದಲ್ಲಿ‌ ನಾಯಕರಿಬ್ಬರ ಸುತ್ತ‌ ಅಗೋಚರವಾಗಿ ಜರುಗುವ ಘಟನೆಗಳು ಅವರ‌ ಮೇಲೆ ಹೇಗೆ ಪರಿಣಾಮ ಬೀರುತ್ತೆ. ಘಟನೆಗಳ‌ ಕಾರಣ ಹುಡುಕಿ ಹೊರಟಾಗ ಏನೆಲ್ಲ ರೋಚಕತೆ ತೆರೆದುಕೊಳ್ಳುತ್ತೆ ಎನ್ನುವುದು ಸಿನಿಮಾ ಎಳೆ. ಇದನ್ನು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಟ್ವಿಸ್ಟ್ ಟರ್ನ್ ಜೊತೆ ಕಟ್ಟಿಕೊಡಲಾಗಿದ್ಯಂತೆ.

ಚಿತ್ರದಲ್ಲಿ ಖುಷಿ ಹಾಗೂ ಅರ್ಚನಾ ನಾಯಕಿಯರಾಗಿ ನಟಿಸಿದ್ದು, ಜಗದೀಶ್ ಮಲ್ಮಾಡ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀತಾರಾಮ್ ಶಾಸ್ತ್ರಿ ಪ್ರೊಡಕ್ಷನ್ ಹೌಸ್  ಬ್ಯಾನರ್‌ನಡಿ‌ ನಿರ್ಮಾಣವಾಗಿರುವ ಈ ಚಿತ್ರಕ್ಕೆ
ಸಮರ್ಥ್ ಪತ್ನಿ ರೇಷ್ಮಾ ರಾವ್ ಕಾರ್ಯಕಾರಿ‌ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಉಳಿದಂತೆ ಸುದರ್ಶನ್ ಜಿ.ಕೆ ಕ್ಯಾಮೆರಾ ವರ್ಕ್, ದ್ವೈಪಾಯಣ್ ಸಿಂಘ ಸಂಗೀತ ‌ನಿರ್ದೇಶನ ಚಿತ್ರಕ್ಕಿದೆ.

ಚಿತ್ರರಸಿಕರಿಗೆ ಸೈನ್ಸ್ ಫಿಕ್ಷನ್ ಸಿನಿಮಾ‌ ಮೂಲಕ‌ ಮನರಂಜನೆ ನೀಡಲು, ಹೊಸಬಗೆಯ‌ ನಿರೂಪಣೆ, ತಾಂತ್ರಿಕ ಶ್ರೀಮಂತಿಕೆಯನ್ನು ಉಣ ಬಡಿಸಲು ಬರ್ತಿರುವ ಕ್ಯಾನ್ಸೀಲಿಯಂ ಚಿತ್ರ ಡಿಸೆಂಬರ್ 10ಕ್ಕೆ ತೆರೆಗೆ ಬರಲಿದೆ.

Swathi MG

Recent Posts

ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಕಾರು ಡಿಕ್ಕಿ : 6 ಜನ ಮೃತ್ಯು

ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಮೃತಪಟ್ಟಿರುವ ಘಟನೆ ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ನಡೆದಿದೆ ಎಂದು…

24 seconds ago

ಲೊಕಸಾಭಾ ಚುನಾವಣೆ : ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಕಾಲಭೈರವನ ದರ್ಶನ ಪಡೆದು ಬಳಿಕ…

14 mins ago

ಸಾಣೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ -169 : ಸಮಸ್ಯೆಗಳು ಹತ್ತಾರು

ರಾಷ್ಟ್ರೀಯ ಹೆದ್ದಾರಿ-169 ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಬಿಕರ್ನ…

20 mins ago

ರಘುಪತಿ ಭಟ್ ಮನೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಭೇಟಿ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ…

32 mins ago

ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್‌ ಬೆದರಿಕೆ

ದೇಶದಾದ್ಯಂತ ಬಾಂಬ್‌ ಬೆದರಿಕೆ ಹಾಕುತ್ತಿರುವ ಹಿನ್ನಲೆಯಲ್ಲಿ ಇದೀಗ ನಗರದ ಖಾಸಗಿ ಶಾಲೆಯೋಂದಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಹಾಕಿದ್ದಾರೆ. ಅಮೃತಹಳ್ಳಿ ಠಾಣಾ…

47 mins ago

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ವೈದ್ಯಾಧಿಕಾರಿಯಿಂದ ಹಲ್ಲೆ; ಕುಸಿದು ಸಾವನ್ನಪ್ಪಿದ ಕಿಟ್ಟ

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಪಶು ವೈದ್ಯಾಧಿಕಾರಿಯೊಬ್ಬರು ಹಲ್ಲೆ ನಡೆಸಿದ ಕಾರಣ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ…

59 mins ago