ಭಾವನಾತ್ಮಕವಾಗಿ ಬಂಧಿಸುತ್ತಿದೆ ‘ಕನ್ನೇರಿ’ ಚಿತ್ರದ  ಈ ಹಾಡು..!

ಸ್ಯಾಂಡಲ್ ವುಡ್: ಕೆಲವೊಂದು ಸಿನಿಮಾಗಳು ಭಾವಾನಾತ್ಮಕವಾಗಿ ಎಲ್ಲರನ್ನು ಆವರಿಸಿ ಬಿಡುತ್ತದೆ. ನೋಡುತ್ತಾ ನೋಡುತ್ತಾ ಕಣ್ಣಾಲಿಗಳು ತೇವವಾಗುತ್ತವೆ. ಅಂತದ್ದೊಂದು ಸನ್ನಿವೇಶ ಸೃಷ್ಟಿಸುತ್ತಿರುವುದು ಕನ್ನೇರಿ ಸಿನಿಮಾ. ಸದ್ಯ ಮತ್ತೊಂದು ಸಾಂಗ್ ರಿಲೀಸ್ ಮಾಡಿ, ಭಾವನೆಯಲ್ಲೇ ಕಟ್ಟಿ ಹಾಕುತ್ತಿದೆ.

‘ಕಾಣದ ಊರಿಗೆ ಕೂಲಿಗೆ ಹೊರಟೋಳೆ.. ಕಣ್ತುಂಬ ಕನಸುಗಳ ತೇರನ್ನೇ ಹೊತ್ತೋಳೆ’ ಸಾಲಿನಿಂದ ಆರಂಭವಾಗುವ ಈ ಹಾಡು ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎನಿಸುತ್ತಿದೆ. ಕೇಳುತ್ತಾ ಹೋದಾಗ ಮತ್ತೆ ಮತ್ತೆ ಕಾಡುವ ಸಾಲುಗಳು ನಮ್ಮ ಕಣ್ಣಾಲಿಯಲ್ಲಿ ನೀರು ತರಿಸುತ್ತವೆ. ಗೇಣುದ್ದ ಗೆಣಸಿಗೆ ಕಾಡೆಲ್ಲಾ ಅಲೆದವಳೆ.. ಕನಸಿಲ್ಲ ಯಾಕವ್ವ ಕಣ್ಣಾಗಾ.. ಬಲವಿಲ್ಲ ಯಾಕವ್ವ ರೆಟ್ಯಾಗ.. ಜೇನಿಗೆ ಹೋದ ಅಪ್ಪ ಆನೆಗೆ ಬಲಿಯಾದ..  ಈ ಸಾಲುಗಳು ಅದೆಷ್ಟು ರಿಯಾಲಿಟಿಯನ್ನ ಹೊತ್ತು ಸಾಗುತ್ತಿವೆ ಅನ್ನೋದನ್ನ ಸಪರೇಟ್ ಆಗಿ ಹೇಳಬೇಕಿಲ್ಲ.

ಕೀರ್ತನಾ ಹೊಳ್ಳ ಹಾಗೂ ಇಂದು ನಾಗರಾಜ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಮಣಿಕಾಂತ್ ಕದ್ರಿ ಸಂಗೀತ ಒಂದು ಕ್ಷಣ ಎಲ್ಲರೊಳಗೂ ನರಳುವಂತೆ ಮಾಡುತ್ತಿದೆ. ಈ ಸಿನಿಮಾದಿಂದ ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿ ಎಲ್ಲರ ಮನ ಗೆದ್ದಿವೆ.  ಇದೀಗ ಈ ಹಾಡು ಕೂಡ ಎಲ್ಲರ ಮನಸ್ಸಿನ ಕದ ತಟ್ಟಿದೆ. ಹಾಡಿನ ಸಾಹಿತ್ಯವೇ ಇಷ್ಟು ಹತ್ತಿರವಾಗಿದ್ದರೆ, ಸಿನಿಮಾ ಇನ್ನೆಷ್ಟು ಗಟ್ಟಿ ಕಥೆಯನ್ನ ಹೊಂದಿರಬಹುದು ಎಂಬುದು ಎಲ್ಲರ ಕುತೂಹಲ.

ಈಗಾಗಲೇ ಎಲ್ಲರಿಗೂ ಗೊತ್ತಿರೋ ವಿಚಾರ ಕನ್ನೇರಿ ಸಿನಿಮಾ ದಿಡ್ಡಳ್ಳಿ ಜನರ ಬದುಕು ಬವಣೆಯನ್ನ ಆಧರಿಸಿ ಹೆಣೆಯಲಾಗಿದೆ. ಅಲ್ಲಿನ ಜನರ ಜೀವನ ಹೋರಾಟದ ಬಳಿಕ ಏನಾಯ್ತು ಅನ್ನೋದನ್ನ ತೋರಿಸಲು ಹೊರಟಿದ್ದಾರೆ ನಿರ್ದೇಶಕರು. ಎಷ್ಟೆಲ್ಲಾ ತಯಾರಿ ನಡೆಸಿದ್ದಾರೆ, ಹೇಗೆಲ್ಲಾ ಸಿನಿಮಾ ಮೂಡಿ ಬಂದಿರಬಹುದು ಎಂಬುದ ಈಗಾಗಲೇ ಹಾಡುಗಳನ್ನ ನೋಡಿದವರಿಗೆ ತಿಳಿಯುತ್ತಿದೆ, ನಿರ್ದೇಶಕ ನೀನಾಸಂ ಮಮಜು ಕೂಡ ಅದೆಷ್ಟು ಎಫರ್ಟ್ ಹಾಕಿದ್ದಾರೆ ಎಂಬುದು ಗೊತ್ತಾಗ್ತಿದೆ.

ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ನಲ್ಲಿ ಪಿಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ರೆ, ಅರುಣ್ ಸಾಗರ್, ಅನಿತಾ ಭಟ್, ಸರ್ದಾರ್ ಸತ್ಯ, ಕರಿ ಸುಬ್ಬು ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Swathi MG

Recent Posts

ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ

ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

2 mins ago

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

13 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

28 mins ago

ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ…

42 mins ago

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

44 mins ago

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

1 hour ago