News Karnataka Kannada
Monday, April 29 2024
ಸಾಂಡಲ್ ವುಡ್

ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಟ ನಾಗಶೇಖರ್

Nagashekhar
Photo Credit :

ಬೆಂಗಳೂರು:  ಸ್ಯಾಂಡಲ್ ವುಡ್ ಖ್ಯಾತ ನಟ, ನಿರ್ದೇಶಕ ನಾಗಶೇಖರ್ ಅವರಿಗೂ ಮಹಿಳೆಯೊಬ್ಬರು ವಂಚನೆ ಮಾಡಿದ್ದಾರೆ.ಹೀಗಾಗಿಯೇ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

2020ರ ಆಗಸ್ಟ್ ನಲ್ಲಿ ಮನೆ ಖರೀದಿಸೋದಕ್ಕೆ ಮುಂದಾಗಿ, ಆರ್ ಆರ್ ನಗರದ ಜಯಣ್ಣ ಲೇಔಟ್ ನಲ್ಲಿನ ಮನೆ ಮಾಲೀಕೆ ಮೀನಾ ಎಂಬುವರೊಂದಿಗೆ 2.70 ಕೋಟಿಗೆ ಸೇಲ್ ಅಗ್ರಿಮೆಂಟ್ ಕೂಡ ನಟ ನಾಗಶೇಖರ್ ಮಾಡಿಕೊಂಡಿದ್ದಾರೆ.ಈ ಬಳಿಕ ಹಂತ ಹಂತವಾಗಿ 50 ಲಕ್ಷ ಹಣವನ್ನು ಮನೆ ಖರೀದೋ ಸಂಬಂಧ ಮೀನಾ ಅವರಿಗೆ ನೀಡಿದ್ದಾರೆ.

ಆದರೆ ,ಸೇಲ್ ಅಗ್ರಿಮೆಂಟ್ ಮಾಡಿಕೊಂಡರೂ, ಹಂತ ಹಂತವಾಗಿ 50 ಲಕ್ಷ ಹಣ ಪಡೆದ್ರೂ, ಮನೆ ಮಾಲೀಕೆ ಮೀನಾ ಮಾತ್ರ ಅದೇ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಈ ವಿಷಯ ತಿಳಿದು ಮೀನಾ ಅವರನ್ನು ನಟ ನಾಗಶೇಖರ್ ಪ್ರಶ್ನಿಸಿದಾಗ, ಅತ್ತ ದುಡ್ಡು ಕೊಡದೇ, ಇತ್ತ ಮನೆಯನ್ನು ನೀಡದೇ ಸತಾಯಿಸುತ್ತಿದ್ದಾರೆ. ನಾನು ಮೀನಾ ಅವರಿಗೆ ನೀಡಿರುವಂತ ಹಣವನ್ನು ವಾಪಾಸ್ ಕೊಡಿಸುವಂತೆ ನಟ ನಾಗಶೇಖರ್ ಮೀನಾ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು