ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಪುನೀತ ನಮನದಲ್ಲಿ, ಅಪ್ಪುವಿನ ಜೀವನ ಸಾಧನೆಯ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.
ನಟ ಸುದೀಪ್ ಧ್ವನಿಯಲ್ಲಿ ಮೂಡಿಬಂದ ಸಾಕ್ಷ್ಯಚಿತ್ರದ ನಂತ್ರ, ಕ್ಯಾಂಡಲ್ ಹಚ್ಚಿ ಅಗಲಿದ ರಾಜಕುಮಾರನಿಗೆ ಗೀತ ನಮನವನ್ನು ಸಲ್ಲಿಸಲಾಯಿತು.
ಗಣ್ಯರು ಪುನೀತ್ ರಾಜ್ ಕುಮಾರ್ ಗೆ ಗೀತಾಂಜಲಿ ಮೂಲಕ ಗೀತ ನಮನವನ್ನು ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆಯ ಮೂಲಕ ಪುನೀತ ನಮನದಲ್ಲಿ ಗೀತ ಮನವನ್ನು ರಾಜಕುಮಾರನಿಗೆ ಸಲ್ಲಿಸಲಾಯಿತು.
ಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಟಿ ಉಮಾಶ್ರೀ, ನಟಿ ತಾರಾ, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ವಂದಿತಾ, ರಾಜವಂಶಸ್ಥರಾದ ಯದುವೀರ್ ಒಡೆಯರ್, ನಟ ದರ್ಶನ್, ತೆಲುಗು ನಟ ವಿಶಾಲ್ ಸೇರಿದಂತೆ ಕಾರ್ಯಕ್ರಮದ ವೇದಿಕೆಯ ಪ್ರಥಮ ಸಾಲಿನಲ್ಲಿದ್ದ ಸಿನಿರಂಗದ ಹಾಗೂ ರಾಜಕೀಯ ಗಣ್ಯರು ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ‘ಪುಷ್ಪ ನಮನ’ ಸಲ್ಲಿಸಿದರು.