News Karnataka Kannada
Monday, April 29 2024
ಸಾಂಡಲ್ ವುಡ್

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ‌ ಹೊಸ ಸಿನಿಮಾ- ‘ ಕದ್ದ ಚಿತ್ರ’

Vijay Raghavendra
Photo Credit :

ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನಲ್ಲಿ ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧಿ ಹೊಂದಿರುವ ಪ್ರತಿಭಾನ್ವಿತ ನ ವಿಜಯ ರಾಘವೇಂದ್ರ ಅವರು ತಮ್ಮ ನಟನೆಯ 50 ನೇ ಚಿತ್ರವನ್ನು ಪೂರೈಸಿದ್ದಾರೆ. ಇದೀಗ ಮುಂದಕ್ಕೆ ಹೆಜ್ಜೆ‌ ಇಟ್ಟಿದ್ದಾರೆ. ಅವರ ನಟನೆಯ ‘ ಸೀತಾರಾಮ್ ಬಿನೋಯ್ ಕೇಸ್ ನಂ. 18 ‘ ಇತ್ತೀಚೆಗೆ ರಿಲೀಸ್ ಆಗಿದೆ. ಉತ್ತಮ ನಟನೆಯ ಮೂಲಕ ಇವರು ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ್ದಾರೆ.
ಬಹಳ ಚಾಲೆಂಜಿಂಗ್ ಪಾತ್ರವನ್ನು ಲೀಲಾಜಾಲವಾಗಿ ನಟಿಸುವ ಈ ನಟ ಇದುವರೆಗೆ ನಟಿಸಿದ ಎಲ್ಲಾ ಪಾತ್ರಗಳಿಂದ ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರಕ್ಕೆ ‘ಕದ್ದ ಚಿತ್ರ’ ಎಂದು ಹೆಸರಿಡಲಾಗಿದೆ. ಟೈಟಲ್ ಮತ್ತು ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದೆ. ಸೈಕಾಲಜಿ ಥ್ರಿಲ್ಲರ್ ಚಿತ್ರ ಇದಾಗಿದೆ, ಸುಹಾಸ್ ಕೃಷ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಯ ಲುಕ್ ಬೇರೆ ತರ ಇರಲಿದೆ ಎಂದಿದ್ದಾರೆ ನಿರ್ದೇಶಕ ಸುಹಾಸ್.
‘ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರ ಲುಕ್ ಮತ್ತೆ ನಟನೆ ಪೂರ್ಣ ರೀತಿಯಲ್ಲಿ ಬೇರೆ ರೀತಿ‌ ಇರಲಿದೆ. ಇವರ ನಟನೆಯಲ್ಲಿ ಮೂಡಿಬಂದ ಈವರೆಗಿನ ಸಿನಿಮಾಗಿಂತಈ ಈ ಸಿನಿಮಾ ಪೂರ್ತಿ ಭಿನ್ನವಾಗಿದೆ.ಹೀರೋ ತನ್ನ ಖುಷಿಗೆ ಇಷ್ಟಬಂದಂತೆ ಬರೆದುಕೊಂಡಿರುತ್ತಾನೆ. ಬರಹಗಾರನೊಬ್ಬ ದಿನಬೆಳಗಾಗುವುದರಲ್ಲಿ ಖ್ಯಾತಿ ಗಳಿಸಿ ಸ್ಟಾರ್‌ ಆಗುತ್ತಾನೆ. ಕೆಲವೊಮ್ಮೆ ದಿನಬೆಳಗಾಗುವುದರಲ್ಲಿ ಕೆಳಕ್ಕೂ ಬೀಳುತ್ತಾನೆ. ಹೀಗಾದಾಗ ಹೇಗನ್ನಿಸುತ್ತೆ ಅನ್ನೋದು ಚಿತ್ರದಲ್ಲಿದೆ. ಇದರ ನಡುವೆ ಒಂದು ಕ್ರೈಂ ನಡೆಯುತ್ತೆ. ರೈಟರ್‌ ಮತ್ತು ಕ್ರೈಂ ಕನೆಕ್ಟ್ ಆದಾಗ ಏನಾಗುತ್ತೆ ಎನ್ನುವುದು ಕಥೆ. ಚಿತ್ರದಲ್ಲಿಎಮೋಷನ್ಸ್‌ ಬಹಳ ಇವೆ. ಹೀರೋಗೆ ಮೂರ್ನಾಲ್ಕು ಥರದ ಎಮೋಷನ್ಸ್‌ ಇದ್ದಕ್ಕಿದ್ದಂತೆ ಬಂದು ಹೋಗುತ್ತಿರುತ್ತವೆ. ಭಾವನೆಯಲ್ಲಿಏರಿಳಿತಗಳಿರುತ್ತವೆ. ಸಿಕ್ಕಾಪಟ್ಟೆ ನಟನೆಯನ್ನು ಬೇಡುತ್ತೆ. ಇದು ವಿಜಯ್‌ ಅವರಿಗೆ ಬಹಳ ಎಕ್ಸೈಟಿಂಗ್‌ ವಿಷಯ ಎನ್ನಿಸಿತು. ಸಿನಿಮಾ ಒಪ್ಪಿಕೊಂಡರು. ತುಂಬಾ ಒಳ್ಳೆಯ ನಟ ಬೇಕಿದ್ದರಿಂದಲೇ ನಾವು ವಿಜಯ್‌ ಅವರನ್ನು ಕೇಳಿದ್ದು. ಬೇರೆ ಶೇಡ್‌ಗಳಿರುವ ಪಾತ್ರ ಇದು’ ಎನ್ನುತ್ತಾರೆ ಸುಹಾಸ್‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು