ಕನ್ನಡ ಚಿತ್ರರಂಗದಲ್ಲೇ ಪ್ರೀತಿಯ ಹೊಸ ವ್ಯಾಖ್ಯಾತ ಬರೆದ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷ. ಇಂದು ಕುಳಿತು ಈ ಸಿನಿಮಾ ನೋಡಿದರೂ ಈಗಿನ ಕಾಲದ ಕಥೆ ಎಂದೇ ಅನಿಸುತ್ತದೆ.
ಯೋಗರಾಜ್ ಭಟ್, ಹರಿಕೃಷ್ಣ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿಬಂದಿದ್ದು, ಹಾಡುಗಳು ಸೂಪರ್ ಹಿಟ್ ಆಗಿದ್ದವು. ಸಿನಿಮಾ ಬಿಡುಗಡೆಗೂ ಮುನ್ನವೇ 25 ಕೋಟಿ ರೂ. ಬಾಚಿಕೊಂಡಿತ್ತು.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಸಂದೇಶ ಈ ಸಿನಿಮಾದ್ದು. ಮುಕ್ಕಾಲು ಸಿನಿಮಾ ಬರೀ ನಗೆಯ ಕಚಗುಳಿ ಇದ್ದರೆ, ಕಡೆಗೆ ಮಾತ್ರ ಕಣ್ಣಂಚಲ್ಲಿ ನೀರು ಬರುತ್ತದೆ. ಅದು ದುಃಖದ ಕಣ್ಣೀರಲ್ಲ, ಖುಷಿಯದ್ದು! ಇಂತಹ ನೂರು ಸಿನಿಮಾಗಳು ಬರಲಿ ಎಂದು ಪ್ರೇಕ್ಷಕರು ಈಗಲೂ ಅಪೇಕ್ಷೆ ಪಡುತ್ತಿದ್ದಾರೆ.