News Karnataka Kannada
Thursday, May 09 2024
ಸಾಂಡಲ್ ವುಡ್

ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ರಾಕಿಂಗ್​ ಸ್ಟಾರ್​ ದಂಪತಿ

ರಾಕಿಂಗ್​ ಸ್ಟಾರ್​ ದಂಪತಿ ನಿನ್ನೆ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
Photo Credit : News Kannada

ಕಾರವಾರ: ರಾಕಿಂಗ್​ ಸ್ಟಾರ್​ ದಂಪತಿ ನಿನ್ನೆ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ನಿನ್ನೆ‌ ಚಿತ್ರಾಪುರ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ವರೆಗೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತು ಕತೆ ನಡೆಸಿದ್ದಾರೆ.

ಸ್ವಾಮೀಜಿ ಗಳೊಂದಿಗೆ ಮಾತುಕತೆ ನಡೆಸಿದ ನಂತರದಲ್ಲಿ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು.

ಚಿತ್ರಾಪುರ ಮಠಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ ಮಕ್ಕಳು ಐರಾ ಮಗ ಯಥರ್ವ ಹಾಗೂ ರಾಧಿಕಾ ಪಂಡಿತ್ ತಂದೆ ತಾಯಿ ಆಗಮಿಸಿದದ್ದರು.ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ಅಗಮನಕ್ಕಾಗಿ ಕಾದಿದ್ದರು.

ಈ ವೇಳೆ ಯಶ್​ ಕಿರಾಣಿ ಅಂಗಡಿಗೆ ತೆರಳಿ ರಾಧಿಕಾ ಪಂಡಿತ್​ಗೆ ಐಸ್ ಕ್ರೀಮ್ ಕೊಡಿಸಿದ್ದಾರೆ. ಮಠದ ಬೀದಿಯಲ್ಲಿರುವ ಅಂಗಡಿಗೆ ತೆರಳಿ ತಿಂಡಿ ತಿನಿಸು ಖರೀದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು